ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೩೯

“ಸ್ವಾಮಿ ! ಮನೆಗೆ ದಯಮಾಡಿಸಿ ಬಡವನ ಆತಿಥ್ಯ ಸ್ವೀಕಾರ ಮಾಡಬೇಕು' ಎಂದು ಶ್ಯಾನುಭೋಗನು ಆಹ್ವಾನವನ್ನು ಕೊಟ್ಟನು.

ಒಳ್ಳೆಯದು ನಡೆಯಿರಿ. ಬೆನ್ನು ಹತ್ತಿರುವ ಸುಖಪ್ರಾರಬ್ಧವನ್ನು ಅನುಭವಿಸಿರಬೇಕಲ್ಲ' ಎಂದು ರಂಗಣ್ಣನು ನಗುತ್ತ ಮುಚ್ಚಳಿಕೆಗಳನ್ನು ಶಂಕರಪ್ಪನಿಗೆ ಕೊಟ್ಟು ಹನುಮನ ಹಳ್ಳಿಯ ಕಡೆಗೆ ಹೊರಟನು. ಗರುಡನ ಹಳ್ಳಿಯವರು ಜೊತೆಯಲ್ಲಿಯೇ ಬಂದು ಹನುಮನ ಹಳ್ಳಿಯ ಪಂಚಾಯತಿಯ ಹಾಲಿನಲ್ಲಿ ಕುಳಿತರು. ರಂಗಣ್ಣನು ಶ್ಯಾನುಭೋಗರ ಮನೆಗೆ ಶಂಕರಪ್ಪನೊಡನೆ ಹೋದನು. ಅಲ್ಲಿ ಉಪಾಹಾರ ಸ್ವೀಕಾರ ಮಾಡುತ್ತ 'ಏನು ಶ್ಯಾನುಭೋಗರೇ! ಪಂಚಾಯತಿಯ ರೆಜಲ್ಯೂಷನ್ನಿನಲ್ಲಿ ಗರುಡನ ಹಳ್ಳಿಗೆ ಬದಲು ಹನುಮನ ಹಳ್ಳಿ ಎಂದು ಕೈ ತಪ್ಪಿನಿಂದ ಬಿದ್ದು ಹೋಯಿತೇ ?' ಎಂದು ಕೇಳಿದನು.

'ಕೈತಪ್ಪೂ ಇಲ್ಲ, ಏನೂ ಇಲ್ಲ ಸ್ವಾಮಿ ! ಆ ಚೇರ್ಮನ್ನು ಈಚೆಗೆ ನನ್ನ ಮೇಲೆ ಇಲ್ಲದ ಕಥೆ ಹರಡಿದ್ದಾನೆ. ಪಂಚಾಯತಿಯ ರೆಜಲ್ಲೂಷನ್ನುಗಳನ್ನು ಬರೆದಮೇಲೆ ಚೇರ್ಮನ್ನಿನ ರುಜು ಆಗುವ ಮೊದಲು ಗಟ್ಟಿಯಾಗಿ ಓದುವ ಪದ್ಧತಿ ಇದೆ. ಜೊತೆಗೆ ಚೇರ್ಮನ್ನು ಓದು ಬರಹ ತಿಳಿದವನು. ನಮ್ಮನ್ನು ನಂಬುವುದಿಲ್ಲ. ಎಲ್ಲವನ್ನೂ ತಾನೇ ಓದಿ ನೋಡಿಕೊಳ್ಳುತ್ತಾನೆ. ಆ ದಿನ ಚರ್ಚೆಯೇನೋ ಆಯಿತು. ಕಡೆಗೆ ಹನುಮನ ಹಳ್ಳಿಯಲ್ಲಿಯೇ ಸ್ಕೂಲನ್ನು ಸ್ಥಾಪಿಸಬೇಕೆಂದು ಬಹುಮತದಿಂದ ನಿರ್ಣಯವಾಯಿತು. ಹಾಗೆ ಚರ್ಚೆಯಾದ ವಿಚಾರವನ್ನು ಆತ ನೋಡದೆ ರುಜು ಮಾಡುವುದೆಂದರೇನು? ಮೇಷ್ಟು ಮೊದಲು ಆ ಹಳ್ಳಿಗೆ ಹೋಗಿ ಆರ್ಡರನ್ನು ತೋರಿಸಿದ. ಅಲ್ಲೇ ಅವನನ್ನು ನಿಲ್ಲಿಸಿಕೊಂಡು ಅಲ್ಲೇ ಸ್ಕೂಲ್ ನಡೆಸೋಣ ಎಂದು ಉಪಾಯ ಮಾಡಿದರು. ಸ್ವಾಮಿ ಪ್ರಮಾಣವಾಗಿ ಹೇಳುತ್ತೇನೆ.”

'ಹೋಗಲಿ ಬಿಡಿ, ಈಗ ನಾನು ಮಾಡಿದ ಏರ್ಪಾಟು ನಿಮಗೆ ಮೆಚ್ಚಿಕೆಯಾಯಿತೇ ?

'ಭೇಷ್ ಏರ್ಪಾಟು ಸ್ವಾಮಿ ! ಎಲ್ಲರಿಗೂ ತೃಪ್ತಿಯಾಯಿತು. ಒಂದುವೇಳೆ ಗರುಡನ ಹಳ್ಳಿಯವರು ಕಟ್ಟಡ ಕಟ್ಟಲಿಲ್ಲ ಅನ್ನಿ, ನಾವೇ