ಪುಟ:ರಂಗಣ್ಣನ ಕನಸಿನ ದಿನಗಳು.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೋರ್ಡು ಒರಸುವ ಬಟ್ಟೆ

೫೫

ಬರಬೇಕು ಸ್ವಾಮಿ. ಕಷ್ಟ ಪಟ್ಟು ಕೆಲಸ ಮಾಡಿದ್ದೆ ನೆ. ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿ ಕೊಟ್ಟಿದ್ದೇನೆ ” ಎಂದನು.

'ಎಲ್ಲರನ್ನೂ ಕಾಪಾಡುವ ಭಗವಂತ ಮೇಲಿದ್ದಾನೆ ಮೇಷ್ಟೇ ! ನೀವು ಎಲ್ಲಿ ” ಎಂದು ಹೇಳಿ ರಂಗಣ್ಣನು ಬೈ ಸ್ಕಲ್ ಹತ್ತಿದನು. ಆ ಬೆಳಗ್ಗೆ ನಡೆದ ಪ್ರಕರಣವನ್ನು ಆಲೋಚನೆ ಮಾಡುತ್ತ ಮಾಡುತ್ತ ಪ್ರಯಾಣದಲ್ಲಿ ಏನು ಆಯಾಸವೂ ತೋರದೆ ಮನೆಗೆ ಬಂದು ಸೇರಿದನು. ಮಧ್ಯಾಹ್ನ ಹನ್ನೆರಡು ಗಂಟೆ ಆಗಿದ್ದಿತು.