ಪುಟ:ರಂಗಣ್ಣನ ಕನಸಿನ ದಿನಗಳು.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ಮುನಿಸಾಮಿ

೭೯

'ಮೇಷ್ಟರೇ ! ನಿಮ್ಮ ರೂಪಾಯಿ ನಿಮ್ಮಲ್ಲಿರಲಿ. ಮೊದಲು ಶ್ಯಾನುಭೋಗರನ್ನು ಕಂಡು ಮಾತನಾಡಿ ; ಆ ಮೇಲೆ ನನಗೆ ಕಾಗದ ಬರೆಯಿರಿ. ನನ್ನ ಸಲಹೆ ಕೇಳದೆ ನಿಮ್ಮ ರೂಪಾಯಿ ಗುಡಿಸಿಲಿಗೆ ಖರ್ಚು ಮಾಡಬೇಡಿ ; ನಿಮ್ಮ ಹೆಂಡತಿಗೆ ಸೀರೆ ಇಲ್ಲದಂತೆ ಮಾಡಬೇಡಿ' ಎಂದು ಹೇಳಿ ರಂಗಣ್ಣ ಬೈಸ್ಕಲ್ ಹತ್ತಿದನು.

'ಅಪ್ಪಣೆ ಸ್ವಾಮಿ.'