ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೯೭

ಶ್ರೀಮಂತನೂ , ಆತನ ಪತ್ನಿಯೂ ನಿರಾಶರಾಗಿ, ಅತ್ಯಂತ ಶೋಕ ದಿಂದ ನರಳುತ್ತಿರುವರು. ನಾನೂ ನನ್ನ ಶಕ್ತಿಯಲ್ಲ ವನ್ನೂ ಪ್ರಯೋ ಗಿಸಿ, ಅವರನ್ನು ಸಮಾಧಾನಪಡಿಸಿ, ನಿಜಾಂಶವನ್ನು ಪ್ರತ್ಯಕ್ಷಪ್ರಮ ಣಕ್ಕೆ ತರಬೇಕೆಂದು ಹೊರಟುಬಂದೆನು, ಅವಿದ್ಯಾವಾಗೀಶ ಮಹಾ ಮಹೋಪಾಧ್ಯಾಯನ ಪ್ರಿಯಶಿಷ್ಯನ ವಿಚಾರವಾಗಿ ಮರಗುತ್ತ ಸತ್ವ ಪರೀಕ್ಷೆಯಲ್ಲಿ ರುವನೆಂದು ನಮ್ಮ ಸುಮುಖನಿಂದ ಕೇಳಿ ತಿಳಿ ದೆನು. ಈಗ ಇನ್ನೇನು ಮಾಡಬಹುದು?

(ಕ್ಷಣಕಾಲ ಚಿಂತಿಸುತ್ತಿದ್ದು, ಮೇಲೆ ನೋಡಿ ಗಾಬರಿಯಿಂದ)


«ಏನಿದು! ಈಗಾಗಲೇ ಬಿಸಿಲೇರುತ್ತ ಬಂದಿದೆ! ಇಷ್ಟು ಹೊತ್ತಾ ದರೂ ನನ್ನಿ೦ದ ನಿಯೋಜಿಸಲ್ಪಟ್ಟು ಹೋಗಿರುವ ತಾರಣನು, ಇನ್ನೂ ಏಕೆ ಬಂದಿಲ್ಲ ?” ಕರೆಯಕಡೆ ನೋಡಿ-" ಇದೋ ಇತ್ತ ಬಂದನು.”

ತಾರಣ:-(ಮುಂದೆ ಬಂದು) "ಆರ್ಯನೇ ? ಜಯವಾಗಲಿ."
ಕ್ಷೇಮ:- ಅಯ್ಯ ! ಹೋಗಿದ್ದ ಕೆಲಸವೇನಾಯಿತು ? ಎಷ್ಟರ ಮಟ್ಟಿಗೆ ಸಾಧ್ಯ?
ತಾರಣ:- ಎಲ್ಲ ವೂ ಸಾಧ್ಯವಾಗಿದೆ. ನಾಟಕಶಾಲಾಧ್ಯಕ್ಷನು ತಮ್ಮ ಪತ್ರಿಕೆಯನ್ನು ನೋಡಿದೊಡನೆಯೇ, ಈ ಎರಡು ಪತ್ರಿಕೆಗಳನ್ನೂ ಮತ್ತು ಬೇರೊಂದು ಪತ್ರಿಕೆಯನ್ನೂ ತಮಗೆ ಒಪ್ಪಿಸಬೇಕೆಂದು ಕೊಟ್ಟು ಬಿಟ್ಟನು. (ಎಂದು ಕ್ಷೇಮದರ್ಶಿಯ ಕೈಗೆ ಕೊಡುವನು )
ಕ್ಷೇಮ:- (ಪತ್ರಗಳನ್ನು ಬಿಚ್ಚಿ ನೋಡಿ) ಭಲೆ! ಭಲೆ || ನಮ್ಮ ಕೆಲ ಸಕ್ಕೆ ಇದೇ ಜಯ ಸೂಚನೆ.”

ತಾರಣ-ಅದೇನು? ಏನೆಂದು ಬರೆದಿದೆ?

ಕ್ಷೇಮ:- ಇದೊ-ಇದೇ ರಮಾನಂದನ ಹೆಸರಿನಲ್ಲಿ ನಾಟಕ ಶಾಲಾಧ್ಯಕ್ಷನಿಗೆ ಬರೆದುಕೊಂಡ ಪ್ರಾರ್ಥನಾಪತ್ರವು ಇದೇ ರವಿವ ರ್ಮನು ನಾಟಕಸಂಘಾಧ್ಯಕ್ಷನಿಗೆ- “ ಈ ಪತ್ರಗಳಲ್ಲಿ ರಮಾನಂದನ ಹೆಸರಿನಲ್ಲಿ ರುವದನ್ನು ಮಾತ್ರ ನಿನ್ನಲ್ಲಿರಿಸಿಕೊಂಡು ಮತ್ತೊಂದನ್ನು