ಪುಟ:ರಮಾನಂದ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ಈಗಿ ಸ್ನಾನ ೨:-ವಿದಿತ್ಯಶಾಲೆ ( ಪೀಠಸ್ಥನಾದ ಗುರುವಿನ ಪ್ರದೇಶ. ) ಸತ್ಯ:- (ಮುಂದೆಬಂದು) ಪೂಜ್ಯ 1 ಎಲ್ಲರನ್ನು ಕರೆದುಬಂದಿ ರುವೆನು, ರಮಾನಂದನು ಮಾತ್ರ ಗೋಚರನಾಗಿಲ್ಲ. ಉಳಿದವರೆಲ್ಲ ಕಹಿ ಬರುವೆವೆಂದು ಹೊರಟಿದ್ದರು, ಉಪಾಧ್ಯಾಯ:- ಅವನೇ ಸಿಕ್ಕಲಿಲ್ಲವೆ? ನೋಡು; ಸರ್ವ ಪ್ರ ಯತ್ನ ದಿಂದಲೂ ಆತನನ್ನು ಹುಡಿಕಿ, ಕರೆತರಬೇಕು. ಕ್ಷೇಮ:- “ನೋಡುವೆನು' (ಹೋಗುವನು) (ರವಿವರ್ಮ, ನಳ, ಕಳಿಂಗ ಸೌಮ್ಯ, ಸುಮುಖ, ಯುವಾನರ ಪ್ರವೇಶ.) ಎಲ್ಲ ರೂ:-(ಮುಂದೆ ಬಂದು ಕೈಮುಗಿದು) : ಪೂಜ್ಯರಿಗೆ ವಂದನೆ.' ಉಪಾ:-(ತಲೆದೂಗಿ) 'ಹo! ನಿಯತಸ್ಯಾನದಲ್ಲಿ ನಿಲ್ಲಿರಿ.' ( ಎಲ್ಲರೂ ಸರಿಯಾಗಿ ನಿಲ್ಲುವರು. ) ಉಪಾ:- ಸೌಮ್ಯನೆ ರಮಾನ೦ದನೆಲ್ಲಿ ? ಏಕ ಬರಲಿಲ್ಲ ? ಸೌಮ್ಯ:- ಈ ದಿನ ಪ್ರಾತ:ಕಾಲದಿಂದಲೂ ಅವನ ಸುಳಿವೇ ಇಲ್ಲ. ಉಪಾ:- ನಿನ್ನೆ ರಾತ್ರಿ ಎಲ್ಲಿದ್ದೇನು ? ಸಮ್ಮ:- ಅರ್ಧ ರಾತ್ರಿಯವರೆಗೆ ತೋಟದಲ್ಲಿದ್ದು, ಆ ಬಳಿಕೆ ತಮ್ಮ ದೇವಿಯರು ಬರಹೇಳಿದುದರಿಂದ, ಅವರನ್ನು ನೋಡಲು ಹೋದನು, ಮತ್ತೆ ಬಂದು ಮುಂದಿರದಲ್ಲಿಯೇ ಮಲಗಿರಬೇಕು. ಉಪಾ:- ಸತ್ಯವಾಗಿ ಹೇಳುತ್ತಿರುವಿಯೊ ? ಸೌಮ್ಯ:- ಸಪ್ರಮಾಣವಾಗಿ ಸತ್ಯವನ್ನೇ ಹೇಳುವೆನು. ಉಪಾ:- ನಮ್ಮ ಮನೆಯಿಂದ ಹೊರಟುಬಂದ ಬಳಿಕಾಗಲೀ, ಅಲ್ಲಿಗೆ ಬರುವುದಕ್ಕೆ ಮೊದಲಾಗಲೀ ಮತ್ತಲ್ಲಿ ಗೂ ಹೋಗಿರಲಿ ಲ್ಲವೇ ? ಸೌಮ್ಯು:-ಮತ್ತೆಲ್ಲಿಗೂ ಹೋಗಿರಲಿಲ್ಲ ವೆಂದು ಹೇಳಬಲ್ಲೆನು.