ಪುಟ:ರಮಾನಂದ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o೨ ಸತೀಹಿತೈಷಿಣೀ ಉಪಾ:- ತೋಟಕ್ಕೆ ನೀವಿಬ್ಬರೂ ಜತೆಯಾಗಿ ಹೋಗಿ ಡ್ಡಿರೋ ? - ಸೌಮ್ಯ: – ಇಲ್ಲ. ಅವನು ಮುಂದಾಗಿ ಹೋಗಿದ್ದನು. ಆ ಬಳಿಕ ನಾನು ಹೋಗಿ ಸೇರಿದೆನು. ಉಪಾ:- ಅಲ್ಲಿ ಅವನು ಏನು ಮಾಡುತ್ತಿದ್ದನು? ಯಾರೊಡ .ನಿದ್ದನು? ಸೌಮ್ಯ:-ಒಬ್ಬನೇ ಕಲ್ಲು ಜಗಲಿಯ ಮೇಲೆ ಕುಳಿತು ಆಲೋ ಚಿಸುತ್ತಿದ್ದನು. ಉದಾ:- ಏನನ್ನು ಕುರಿತು ಆಲೋಚನೆ ? ಸ್ತ್ರೀವ್ಯಾಮೋಹ 10 ವನ್ನು ಕುರಿತೇ ? ಸೌಮ್ಯ:- ಪೂಜ್ಯರೆ! ಹಿರಿಯರ ಬಾಯಿಂದ ರಮಾನಂದನ ವಿಚಾರದಲ್ಲಿ ಇಂತಹ ದೋಷಾರೋಪಣೆಯು ಬರಬಾರದು. ಆತನು ಇದಕ್ಕೆ ಗುರಿಯಾಗುವಂತಿಲ್ಲ. ಉಪಾ:- ಚಾಗಿದ್ದರೆ ಸಂತೆ ೧ಷ, ಆತನು 'ಮಧುಕರಿ' 16 ಎಂಬ ವೇಶ್ಯಯನ್ನು ನೋಡಿಯಾದರೂ ಇರುವನೋ, ಇಲ್ಲವೋ? ಸೌಮ್ಯ:- ಗುರುದೇವ! ನಿಷ್ಕಲಂಕಿಯಾದ ರಮಾನಂದನಲ್ಲಿ ಕಲಂಕವನ್ನು ಹೊರಿಸುವದಕ್ಕೂ, ಆತನ ಜೀವಿತವನ್ನು ಕೊನೆಗಾಣಿ ಸುವದಕ್ಕೂ ಹೊಲ ಚಿರುವ ದ್ರೋಹಿಗಳ ಹೊರತು, ಮತ್ತಾರೂ ಆತನಲ್ಲಿ ಸಂಶಯ ಪಡುವಂತಿಲ್ಲ, ಮಧುಕರಿಯ ಹೆಸರನ್ನಾದರೂ 20 ಆತನು ಸರಿಯಾಗಿ ಕೇಳಿಲ್ಲ. ಉಪಾ:- ಹಾಗಾದರೆ, ಮಧು ಕರಿಯ ಪ್ರೇಮ ಪತ್ರಿಕೆಗಳೂ ಭಾವಚಿತ್ರವೂ ಇವನಲ್ಲಿರಲು ಕಾರಣವೇನು? ಸೌಮ್ಯ:- ಗುರುದೇವ! ಇದಕ್ಕೆ ಕಳಿಂಗ, ರವಿವರ್ಮರೇ ಉತ್ತರವಾದಿಗಳಾಗಬೇಕು, 25 ಕಳಿಂಗ, ರವಿ:- ಹಾ ಹಾಗೆಂದರೇನು? ನಾವೇಕ ಉತ್ತರ