ಪುಟ:ರಮಾನಂದ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಸಹಿತೈಷಿಣೀ ತಲೆಯ ಮೇಲೆ ಗಂಟನ್ನು ಹೊತ್ತು ಕೊಂಡು ಬರುತ್ತಿದ್ದನು. ನಾನು ಎಲ್ಲಿಗೆ ಹೋಗುತ್ತಿರುವೆ' ಎಂದು ಕೇಳಿದುದಕ್ಕೆ ಆತನು ನಮ್ಮ ಕುಮಾರನು ಅಪಮಾನಿತನಾದುದರಿಂದ, ಇಲ್ಲಿ ರಲೊಪ್ಪದೆ ಆರಣ್ಯ ವಾಸಕ್ಕೆ ಹೊರಟುಹೋದನು, ಆತನನ್ನು ಅನುಸರಿಸುತ್ತ ನಾನೂ 5 ಅಲ್ಲಿ ಗೇ ಹೋಗುತ್ತಿರುವೆನು ' ಎಂದು ಹೇಳಿ ಹೊರಟುಹೋದನು. ನೆನಗೆ ಇಷ್ಟು ಮಾತ್ರವೇ ಗೊತ್ತಿದೆ. ಉಪಾ:- ಹಾಗಿದ್ದರೆ, ರಮಾನ೦ದನು ಕದ್ದ ಕಳ್ಳ ನಾಗಿ ಓರಿ ಹೋಗಿರುವನೇ? ಸುಮುಖ:- ರಮಾನಂದನು ಕದ್ದು ಹೋಗುವಷ್ಟು ತಪ್ಪಿತವ 10 ನೇನೂ ಮಾಡಿಲ್ಲ. ( ಸತ್ಯಸೇನನ ಪ್ರವೇಶ. ) ಸತ್ಯ:- ವೂಜ್ಯರೆ! ನಾನೂ ಎಲ್ಲೆಲ್ಲಿಯೋ ಹುಡುಕಿ ಸಾಕಣೆ ದೆನು, ರಮಾನ೦ದನು ಮಾತ್ರ ಇನ್ನೂ ಗೋಚರವಾಗಿಲ್ಲ ಉಪಾ:-- ಹಾಗಿದ್ದರೆ ಅವನೇ ಕಳ್ಳನಾಗಿರಬೇಕು. 15 | - ಸುಮುಖ:- ಹಿರಿಯರು ಬೇಕಾದಂತೆ ಹೇಳಿಕೊಳ್ಳಬಹುದು. ರಮಾನಂದನ ಸತ್ವ ಪರೀಕ್ಷೆಗೆ ಇದೇ ಸುಮುಹೂರ್ತವೆಂದು ನಾಟಿ ಸುಮ್ಮನಿರುವೆವು, ಸಂಶಯ ನಿವಾರಣೆಗೆ ನಮ್ಮ ಜನಕನಾದ ಕ್ಷೇಮ ದರ್ಶಿಯನ್ನು ಕರೆಯಿಸಿದರೆ ಎಲ್ಲವೂ ಪ್ರತ್ಯಕ್ಷ ಪ್ರಮಾಣಕ್ಕೆ ಬರುವವು. ಉಪಾ:- ಹಾಗೂ ಆಗಲಿ, ಎಲೈ ಸತ್ಯ ಸೇನ! ನೀನು ಈಗಲೆ S6 ಹೋಗಿ ಕ್ಷೇಮದರ್ಶಿಯನ್ನು ಬೇಗ ಬರಹೇಳು. ಸತ್ಯಸೇನ:- ಆಗಬಹುದು, (ಎಂದು ಹೋಗಿ, ಮತ್ತೆ ಓಡಿಬಂದು) ಪೂಜ್ಯರೇ 'ಕ್ಷೇಮದರ್ಶಿ' ಬ್ರಾಹ್ಮಣೋತ್ತಮರು ಚಂಡಾಲಾಧಿಪನಾದ ಚಿತ್ರಕನೊಡನೆಯ, ಮುಖ್ಯ ಸೇವಕನಾದ ತಾರಣನೂರೆನೆಯ ಇಲ್ಲಿಗೆ ಅತ್ಯವಸರವಾಗಿ ಬರುತ್ತಿರುವರು. ಡಿಕೆ ( ಸುಮುಖಾದಿಗಳು ಉತ್ಸಾಹದಿಂದ ನೋಡುವರು, ಕ್ಷೇಮದರ್ಶಿಯ