ಪುಟ:ರಮಾನಂದ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೧೩ ಸುದ್ದಿಯು ಸಂತೋಷಪ್ರದವೇ ಸರಿ, ಹೇಗಾದರೂ ಆತನು ದಾರಿಗೆ ಬಂದರೆ ಸಾಕಾಗಿದೆ. ಕರಣಿಕ:- ಸ್ವಾಮಿ ತಮ್ಮ ಪರಿಶುದ್ಧಾಂತ:ಕರಣದ ತಪೋ ಬಲದಿಂದ ಎಲ್ಲವೂ ಶುಭವೇ ಆಗುವುದು. ತೆರೆಯಲ್ಲಿ ಇತ್ತ ಬರಬೇಕು, ಇಲ್ಲಿಯೇ ಶ್ರೀಮಂತನಿರುವುದು,” 5, ಕರಣಿಕ:- (ತೆರೆಯ ಕಡೆಗೆ ನೋಡಿ) ಇದೊ ಇದ್ರೂ, ಉಪಾಧ್ಯಾ ಯರೊಡನೆ ಪ್ರಧಾನಿಯೇ ಬರುವಂತಿದೆ. ಶ್ರೀಮಂತ:- ಎಲ್ಲಿ ?' (ಎಂದು ಸಂಭ್ರಮದಿಂದ ಎದ್ದು ನಿಲ್ಲುವನು) (ಕ್ಷೇಮದರ್ಶಿಯೊಡನೆ ವಿದ್ಯಾವಾಗೀಶನ ಪ್ರವೇ ಶ.) ಶ್ರೀಮಂತ:- (ಕೈ ಮುಗಿದು ಪೂಜ್ಯರಿಗೆ ವಂದನೆ | ಸುಖಾಸೀನ 10 ರಾಗಿ ಅನುಗ್ರಹಿಸಬೇಕೆಂದು ಪ್ರಾರ್ಥನೆ. - ವಿದ್ಯಾ:- ಕಲ್ಯಾಣಮಸ್ತು; ಎಲ್ಲ ರೂ ಕುಳ್ಳಿರಿ. - (ಎಂದು ಎಲ್ಲರೊಡನೆ ಕುಳಿತುಕೊಳ್ಳುವನು.) ಶ್ರೀಮಂತ:- ಪೂಜ್ಯರೆ ಸತ್ಪುರುಷರ ಸಂಗತಿಗೂ ಹೆಚ್ಚಾದ ತಪೋಶಕ್ತಿಯಿಲ್ಲವಾದುದರಿಂದ, ತಮ್ಮ ಇಂದಿನ ದರ್ಶನ-ಸಂಭಾಷ 15 ಣಾದಿಗಳಿ೦ದ ನಾನೇ ಕೃತಾರ್ಥನಾದನೆಂದು ಭಾವಿಸುತ್ತೇನೆ. ವಿದ್ಯಾ:- ಸಂತೋಷ; ಕರೆಯಿಸಿದ ಉದ್ದೇಶವೇನು ? ಶ್ರೀಮಂತ:- ನನ್ನ ದ್ವಿತೀಯ ಪುತ್ರ, ರಮಾನಂದ ಕುಮಾರ ನನ್ನು ಪ್ರೌಢಶಿಕ್ಷಣಕ್ಕೆಂದು ತಮ್ಮ ವಶ ಪಡಿಸುವ ಸಂಕಲ್ಪ. ವಿದ್ಯಾ:- ಕುಮಾರನ ವಯಸ್ಸು ? 20 ಶ್ರೀಮಂತ:- ಹದಿನಾರು. ವಿದ್ಯಾ:- ಈ ವರೆಗೆ ಆಗಿರುವ ವ್ಯಾಸಂಗ ? ಶ್ರೀಮಂತ:- ಜ್ಞಾನೋತ್ಪತ್ತಿಯಾಗುವವರೆಗೆ, ಎಂದರೆ ಪ್ರಾಥ ಮಿಕ ಶಿಕ್ಷಣಾಭಾಗವೆಲ್ಲ ವೂ ಕ್ರಮವಾಗಿ ನಡೆದಿರುವುದು ವಿದ್ಯಾ:- ಶಿಕ್ಷಿತ ಸ್ಥಲವೊ? 45