ಪುಟ:ರಮಾನಂದ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸತೀಹಿತೈಷಿಣೀ, ಶ್ರೀಮಂತ:- ಬಾಲ್ಯ ಶಿಕ್ಷಣವು ಎ೦ದರೆ-ಕುಮಾರನ ೬-೮ ವರ್ಷಗಳ ವರೆಗೆ ತಾಯಿಯ ಸುಶಿಕ್ಷಣೆಯೊಂದೇ ನಡೆಯುತ್ತಿದ್ದು, ಅಲ್ಲಿಂದೀಚೆಗೆ ನಮ್ಮ ಕ್ಷೇಮದರ್ಶಿಯ ಶಿಕ್ಷಣೆಯೂ, ನಮ್ಮಿಬ್ಬರ ವಿಚಾರಣೆಯೂ ನಡೆದಿರುತ್ತವೆ. ವಿದ್ಯಾ :- ಹಾಗಿದ್ದರೆಯೇ ಮಕ್ಕಳು ಮಂದಿಗಳಾಗುವರು. ಇಲ್ಲವಾದರೆ, ಅವರ ಮರ್ಖರೋಗಕ್ಕೆ ಮದ್ದೆ ಇಲ್ಲವಾಗುವದು. ಶ್ರೀಮಂತ:-(ನಿಟ್ಟುಸಿರಿಟ್ಟು) ನನ್ನ ಜೇಷ್ಠ ಪುತ್ರನು ಈ ಬಗೆಯ ಶಿಕ್ಷಣೆಗೆ ಒಳಪಡದಿದ್ದುದರಿಂದಲೇ ಅವಿಧೇಯನಾಗಿ ಕೆಡುತ್ತಿರುವುದು. ವಿದ್ಯಾ:- ಅದು ಅವನ ತಪ್ಪೇನೂ ಅಲ್ಲ, ಮಕ್ಕಳ ದುರ್ವ್ಯ 10 ತಿಗೆ ತಾಯ್ತಂದೆಗಳ ಅಥವಾ ಇತರ ಮುಖ್ಯ ಪೋಷಕರ ಅತಿಯಾದ ಲಾಲನೆ, ಅವಿಚಾರಗಳೇ ಕಾರಣಗಳು, ಇದಕ್ಕಾಗಿಯೇ “ ಸುತ ಕಡಗು, ಲಾಲನಗಳಲಿ ?) ಎಂಬ ರೂಢಿವಚನ ಶ್ರೀಮಂತ:- ನಿಜ? ಆಗ ನಮ್ಮ ಅಭಿಮಾನದಿಂದ ಬೆಳೆಯಿಸಿದ ಫಲವು, ಈಗ ಅನುಭವಿಸುವುದಕ್ಕೆ ಕಷ್ಟವಾಗಿದೆ, ಏನು ಮಾಡುವ? 15 ಅವನನ್ನೂ ಇಲ್ಲಿ ಗೆ ಕರೆಯಿಸಿಕೊಳ್ಳಬೇಕೆಂದು ಯೋಚಿಸಿದ್ದೇನೆ. ವಿದ್ಯಾ :- ಆಗಲಿ, ಸುಕುಮಾರ ರಮಾನಂದನನ್ನು ಬರಮಾಡ ಬಹುದಷ್ಟೆ! (ಶ್ರೀಮಂತ. ಕರಣಿಕನ ಮುಖವನ್ನು ನೋಡುವನು, ಕರಣಿಕನು ಎದ್ದು ಹೋಗಿ, ಮತ್ತೆ ಕುಮಾರಸೊಡನೆ ಪ್ರವೇಶಿಸುವನು. ) 20 ರಮಾನಂದ:- (ಮುಂದೆ ಬಂದು ಶ್ರೀಮಂತನ ಬಳಿಯಲ್ಲಿ ನಿಂದು... ವಿನೀತನಾಗಿ ) ಪೂಜ್ಯರಿಗೆ ವಂದನೆ! ಅಪ್ಪಣೆಯೇನು ? ಶ್ರೀಮಂತ:- (ಸಂಭ್ರಮದಿಂದ ಮಗನ ಕೈಹಿಡಿದು ): ಮಗುವೆ ! ಕುಲಕ್ಕೆ ರಂಜನನೇ ಕುಮಾರನು ' ಎಂದು ಬಲ್ಲ ವರಾಡುವರು. ವಂಶ ವರ್ಧನನಾದ ಸುಪುತ್ರನನ್ನಿ ಸಬೇಕಾದರೆ, ಆತನಲ್ಲಿ ಪ್ರಜ್ಞೆಯು ಚೆನ್ನಾ 25 ಗಿರಬೇಕು, ಅದೂ ವಿದ್ಯಾರ್ಜನೆಯಿಂದಲೇ ದೊರೆಯತಕ್ಕದು, ವಿದ್ಯೆ