ಪುಟ:ರಮಾನಂದ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | ತೃ ತಿ ಯಾ ೦ ಕ . ಶಾರದಾ ಸ್ತುತಿ. ರಾಗ- ( ಚಾಮುಂಡಿ ಪಾಲಿಸು ) ಶ್ರೀವಾಣಿ ಕಲ್ಯಾಣಿ-ಬ್ರಹ್ಮಾಣಿ ಗೀರ್ವಾಣಿ ಕೈವಲ್ಯ ಮಾರ್ಗ ಪ್ರದರ್ಶಿ ನೀ-ಕವಿ ಜೀವಿನೀ ಮಜ್ಜನನೀ 18 ಪಲ || ಕಾಮಿ ೫ ಗುಂಭರಣೀ-ಕಮನೀಯ ಸುತ್ತೋಣಿ | ರಾಮಣೀಯಕ ಪಲ್ಲ ವಪಾಣಿ-ಕೋಮಲ ಶುಕವಾಣಿ 11 ಶ್ರೀ ||೧|| ಮಂಗಳಂ ವಿಧಿರಮಣೀ-ಜಯಮಂಗಳಂ ಘನಕರುಣೀ | ಸಂಗೀತಶಾಸ್ತವಿಲಾಸಿನೀ- ಪರಿಪಾಹಿಮಾಂ ಜನನೀ || ಶ್ರೀ ||೨11 ಭುವನೈಕ ಮೋಹಿನಿತರುಣಿ-ಭಾಷಾಭಿಮಾನಿನಿಜನನೀ | ಶೇಷಶೈಲುವಾಸಕೀರ್ತನಾ-ಮೋದದಾಯಿನಿ ರಮಣಿ 11 ಶ್ರೀ fi೫|| ಸ್ಥಳ ೧:- ವಿದ್ಯಾಶಾಲೆ, ( ನಳ-ಕಳಿಂಗರೊಡನೆ ರವಿವರ್ಮನ ಪ್ರವೇಶ.) ನಳ:-( ಸಂಭ್ರಮದಿಂದ ) ಆಹಾ } ಶಾಲಾ ಪ್ರವೇಶವಾದೆಡೆ ನಯೇ, ಎಂತಹ ಆನಂದವುಂಟಾಗುತ್ತಿರುವುದು ? ಇ೦ದಿನ ಇಷ್ಟು ಉತ್ಸಾಹಕ್ಕೆ ಕಾರಣವೇನು ? ಸುಶ್ರಾವ್ಯವಾದ ಶಾರದಾಸ್ಕತಿಯು ಗೀತಾಮೃತವನ್ನು ಸೇವಿಸಿದುದರಿಂದಲೋ ? ಕಳಿಂಗೆ:-ಹಾಗಲ್ಲ,-ನಳನೇ! ನಮ್ಮ ಇಂದಿನ ಆನಂದಕ್ಕೆ ಕಾರಣವಿದೇನೂ ಅಲ್ಲ, ನಮ್ಮ ವೈರಿಯ ತೇಜೋವಧೆಗೆಂದು, ಈ ದಿನ ನಿಣವು ಹೂಡಿರುವ ಉಪಯುವ ಫಲಕಾರಿಯಾಗುವುದಂಟಿ ಸಂತೋಷವೇ ಕಾರಣವೆಂದು ತಿಳಿ, - ಕವಿ:-ಸಿಜ! ನಮ್ಮ ಈಗಿನ ಮಂಟಪ ಅವನನ್ನು ಹೇಗೂ ಬಿಡುವಂತಿಲ್ಲ.