ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

పిత్రి ಕನ್ನಡದಲ್ಲಿ ಮಹಾತ್ಮರ ಜೀವನ ಚರಿತ್ರೆಗಳು ಬಹಳ ಕಡಿಮೆ. ಇಂಡಿಯಾದ ಇತರ ದೇಶಗಳಲ್ಲಿ ಪಂಡಿತರು ಇಂತಹ ಗ್ರಂಥಗಳನ್ನು ದೇಶಭಾಷೆಯಲ್ಲಿ ಪ್ರಕಟಿಸಿ ಜನರ ಸಂಶಯ ಗಳನ್ನು ಪರಿಹರಿಸುತ್ತಿರುವರು, ನಾನು ಆಂಧ್ರಭಾಷೆಯಿಂದ ಕೆಲವರ ಮಹಾತ್ಮರ ಜೀವನ ಚರಿತ್ರೆಗಳನ್ನು ಕನ್ನಡಿಸಿ ಇದ್ದೇನೆ, ಅವು ಗಳಲ್ಲಿ ಈ ರಾಜಾರಾಮಮೋಹನರಾಯರ ಜೀವನ ಚರಿತ್ರೆಯು ಒಂದಾಗಿದೆ. ಈತನು ಮಾಡಿದ ಸಾಹಸ ಪ್ರಯತ್ನಗಳಿಂದ ಸಂಘಕ್ಕೂ ದೇಶಕ್ಕೂ ಎಷ್ಟೆಷ್ಟು ಉಪಕಾರಗಳಾದುವೆಂಬುದನ್ನು ಈ ಪುಸ್ತಕದಿಂದ ತಿಳಿಯಬಹುದು, ಧಾರಾ ಡದ ಕರ್ನಾಟಕ ವಿದ್ಯಾವರ್ಧಕ ಸಂಘದವರ ಬಹುಮತಿಯನ್ನು ಪಡೆದು ಈ ಗ್ರಂಧವು ಕರ್ನಾಟಕ ಗ್ರಂಥಮಾಲೆಯಲ್ಲಿ ಮುದ್ರಿಸಲ್ಪಟ್ಟಿತ್ತು, ಮೈಸೂರು ಯೂನಿವರ್ಸಿಟಿಯೆಂಬ. ಪ್ರವೇಶಪರೀಕ್ಷೆಗೆ ಪಠನೀಯ ಗ್ರಂಥವನ್ನಾಗಿ ಇದನ್ನು ನಿಯಮಿಸಿದ್ದರಿಂದ ಎರಡನೆಯ ಸಾರಿ ಮುದ್ರಿಸಿದೆ. ಸಾಧ್ಯವಾದ ಮಟ್ಟಿಗೆ ಮೊದಲಿನ ಪ್ರತಿಯಲ್ಲಿದ್ದ ದೊ-ಷಗಳನ್ನು ಪರಿಷ್ಕರಿಸಿ ಮತ ವಿಷಯದಲ್ಲಿ ಬರೆದಿದ್ದ ಉಪೋದ ಸ್ಥಿತವನ್ನು ಮಾತ್ರ ಬಿಟ್ಟುಬಿಟ್ಟಿದೆ. ಪ್ರಮಾದ ಬನಿತ ದೋಷಗಳನ್ನು ಕ್ಷಮಿಸಲು ಗುಣಜ್ಞರು ಪ್ರಾರ್ಥಿತರು, Checked 1969 1ನೇ ಜುಲೈ 1918 ). ಬಸವನಗುಡಿ ಬೆಂಗಳೂರು ಕ, ರಾಮಸ್ವಾಮಯಂಗಾರ್