ಪುಟ:ರಾಣಾ ರಾಜಾಸಿಂಹ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] | ಮಾರ್ಗದೊಳಗಿನ ಯುದ್ಧ ೧೦೩

  • *

ಹದಿನೇಳನೆಯ ಪ್ರಕರಣ. ಮಾರ್ಗದೊಳಗಿನ ಯುದ್ಧ ಪ್ರಾತಃಕಾಲದಲ್ಲಿ ದೊಗಲಸೇನೆಯವರು ಹೊರಡುವ ಸಿದ್ಧತೆ ಯನ್ನು ಮಾಡಹತ್ತಿದರು ಉತ್ತಮವಾದ ಗಡ್ಡ ಮಾಶೆಗಳುಳ್ಳವರು, ಹಾಗೂ ಒರೆಗಳದ ಆಯುಧಗಳುಳ್ಳ ಕುದುರೆ ಸವಾರರು ಸಾಲುಸಾಲಾಗಿ ಹೊರಬೀಳಹತ್ತಿದರು ಒಂದೊಂದು ಸಾಲಿನಲ್ಲಿ ಐದೈದು ಸವಾರರು ಆ ಸವಾರರ ಕುದುರೆಗಳು ಬೆಲೆ ಬಾಳುವಂಧವು ಸವಾರರು ಲಗಾಮು ಬಿಗಿಹಿಡಿದು ಅವ್ರಗಳ ಗತಿಯನ್ನು ತಡೆಯುತ್ತಿದ್ದರು, ಅದರಿಂದ ಇಡೀ ಸಾಲು ಮಲ್ಲ ಮಲ್ಲಗ ಸತಿಯುತ್ತ ಹೋಗುವಂತೆ ಕಾಣಿಸುತ್ತಿತ್ತು. ಚಂಡಲಕುಮಾರಿಯು ಬೆಳಿಗ್ಗೆ ಬೇಗನೆ ಎದ್ದು ನಿತ್ಯ ನೈಮಿತ್ತಿಕ ಕೆಲಸಗಳನ್ನು ತೀರಿಸಿಕೊಂಡು ಶೃಂಗರಿಸಿ ಕೊಳ್ಳಹತ್ತಿದಳು ನಿರ್ಮಲ ಕುಮಾರಿಯು ಆಭರಣಗಳನ್ನಿಡಿಸಹತ್ತಿದಳು ಅಭರಣಗಳನ್ನಿಟ್ಟು ಕೋ ಘ್ನು ಹಿಂದಿಕೆಟಕುಮಾರಿಯು " ಸಟಿ, ನನ್ನ ಕೊರಳೊಳಗೆ ಹೂಮಾಲೆ ಯನ್ನು ಹಾಕುವುದು, ಮರೆಯಬೇಡ' ಸತಿ ಹೋಗುವ ಸ್ತ್ರೀಯಳ ಕೊರಳಲ್ಲಿ ಅವಶ್ಯವಾಗಿ ಮಾಲೆಯು ಬೇಕಾಗುವುದು ?? ಇದನ್ನು ಕೇಳಿ ನಿರ್ಮಲಕುಮಾಲಯ ಕಣೋಳಗೆ ನೀರುತುಂಬ ದವ ** ಸಬಿ, ಹೀಗೇಕೆ ಅಭದ್ರಮಾತಾಡು ? ನಿನಗೆ ರತ್ನ ಮಾಲೆಗೆ ಇನ್ನು ಮೂಡಿಸುತ್ತೇನೆ ಗೆಳತೀ, ನೀನು ಉದಯಪ್ರರದ ರಾಣಿಯಾಗುವು ದಕ್ಕೆ ಹೋಗುವೆಯಲ್ಲವೆ ? 06 ಸಖಿ, ನಿನಗೆ ತಿಳದದ್ದು ಹಾಕು, ಇನ್ನು ಮೇಲೆ ನಾವಿಬ್ಬರೂ ಕೂಡಿರುವಂತಿಲ್ಲ ಉದೇಪುರದಿಂದ ಸುದ್ದಿಯೇ ಇಲ್ಲ. ಕಡೆಗೆ ಮೊದಲು ನಿಶ್ಚಯಿಸಿದಂತೆಯೇ ಆಗುವದು ದಿಲ್ಲಿಯ ಮಾರ್ಗದಲ್ಲಿ ಪ್ರಾಣತ್ಯಾಗ ಮಾಡುವೆನು, ಆ ಯಹನನ ದಾಸಿಯಾಗಲಾರೆನು.”