ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೫

ತೃತಿಯಾಶ್ವಾಸಂ



      ಕಂ|| ಪರಿಮಿತ ಪರಿಜನ ಪರಿವೃತ
            ನರಸಂಬಗೆದರಸಿ ತೇರನೆಸಗಿದ ಗೆಲವಂ||
            ತರವೇಳೆ ವೃದ್ದಕಂಚುಕಿ
            ತರೆ ಬಂದಳ್ ಕೈಕೆ ಬಳಸಿಬರೆ ಸಹಚರಿಯರ್||೬೩||
           
            ತರಳಕಟಾಕ್ಷಂ ಮೋಹನ
            ಶರಮೆನೆ ಮೇಖಲೆಯ ಪರಿಹಾರ್ಯದ ಮಣಿನೂ||
            ಪುರದ ಮಧುರಸ್ವನಂ ಮು
            ಪ್ಪುರಿಗೂಡಿದ ಮದನಪಾಶಮೆನೆ ನಡೆತಂದಳ್||೬೪||

      ಅ೦ತುಬಂದು--

      ಕಂ।। ತನಿಸೋ೦ಕು ಸೋ೦ಕಿ ಸಿಂಹಾ
          ಸನದೊಳ್ ತನ್ನೊಡನೆ ಕೈಕೆ ಕುಳ್ಳಿರೆ ಪುಳಕಂ||
          ತನಗೆ ತಲೆದೋರೆ ದಶರಥ
          ಜನಪತಿ ಕೈವಂದ ಕಲ್ಪತರುವಂ ಪೋಲ್ತಂ||೬೫||

       ಅನಂತರಮಾಕೆಯ ಮುಖಾರವಿಂದಮನಾನಂದ ವಿಸ್ಫಾರಿತ ವಿಲೋಚನನಾಗಿ
ನೋಡಿ--

       ಕಂ|| ಈಕೆ ರಥಮೆಸಗೆ ವೈರಿ ಪ
             ತಾಕಿನಿಯಂ ಗೆಲ್ದೆನೀಕೆ ಗೆಯ್ದುಪಕೃತಿಗಾ||
             ನೀಕೆಯ ಬೇಡಿದುದಂ ನಿ
             ರ್ವ್ಯಾಕುಳಮೀಯದೊಡೆ ಮೆಚ್ಚು ಪೊಳ್ಳಾಗಿರದೇ||೬೬||
    
        ಎಂದು ಪರಿಜನದ ಮೊಗಮಂ ನೋಡಿ ಕೈಕೆಯಂ ನಿನ್ನ ಮೆಚ್ಚಿದುದಂ ಬೇಡಿ ಕೊಳ್ಳೆ೦ಬುದುಂ--

        ಕಂ|| ಏನಂ ಬೇಡುವೆನೆಂದ
              ಬ್ಯಾನನೆ ಬಗೆ ಬೆದರೆ ಬಗೆಗೆ ಬಂದೊಡಮೆಯನೊ||
              ಲ್ದಾ ನೆರೆದಾಗಳೆ ಕುಡಿಮೆಂ
              ದ್ಯಾನೃಪತಿಗೆ ಕೈಕೆ ಬೈಕೆಗೊಟ್ಟಳ್ ಮೆಚ್ಚಂ||೬೭||


ತನು, ಗ; ತನುಸೋಂಕು ಸೋಂಕೆ, ಘ; ತನುಸೋ೦ಕೆ. ಚ.