ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚತುರ್ಥಾಶ್ವಾಸಂ

     ಕಂ|| ಶ್ರೀಸುದತಿ ತನ್ನುರಸ್ಸರ
           ಸೀ ಸದನದೊಳಿರ್ದು ಪಾತ್ರದಾನ ವಿನೋದ||
           ವ್ಯಾಸಂಗಮನೊದವಿಸೆ ಸೌ
           ಖ್ಯಾಸೀನಂ ಪೆಂಪುವೆತ್ತನಭಿನವಪಂಪಂ||೧||

ಅನ್ನೆಗಮಿತ್ತಲ್‌--
      
     ಕಂ|| ಮಿಥಿಳಾ ಪುರಾಧಿನಾಥಂ
           ಪ್ರಥಿತಯಶ೦ ಜನಕನಾಮಹೀಭುಜನ ಮನೋ||
           ರಥ ಭೂಮಿ ವಿದೇಹಿಗದೇಂ
           ಪೃಥು ಕುಚಯುಗದೊಡನೆ ಕೊರ್ವುವಡೆದುದೊ ಮಧ್ಯಂ||೨||

           ಶಶಿಕಾಂತ ಮುಕುರದಂತಿರೆ
           ಶಶಿಮುಖಿಯ ಕದ೦ಪುಗಳ್ ಬೆಳರ್ತುವು ಹರಿನೀ||
           ಲ ಶಲಾಕೆಯಂತೆ ಬಾಸೆಗೆ
           ವಿಶೇಷಮೆನೆ ಪಸರಿಸಿತ್ತು ಕರ್ಪೆಳವಸಿಳೊಳ್||೩||

           ವಳಿರೇಖೆ ಮಸುಳೆ ಗರ್ಭ೦
           ಬಳೆವುದುಮೊಡವಳೆದು ಸತಿಯ ಮಧ್ಯಂ ಚೆಲ್ವಂ||
           ತಳೆದುದು ನಯನಾನಂದಮ
           ನೆಳನೆರೆ ಪರಿಪೂರ್ಣಮಾದೊಡಂ ಪುಟ್ಟಪವೋಲ್||೪||

ಆ ಸಮಯದೊಳ್--

      ಕಂ|| ಭವ ಭದ್ಧ ವೈರದಿಂ ಕಾ
            ದು ವಿದೇಹಿಯ ಗರ್ಭಮಂ ನಿಶಾಚರನಿರ್ದ೦||
            ವಿವಿಧೋಪಸರ್ಗವಂ ಪಡೆ
            ಯವೆ ಮುಳಿಸಂ ಪಡೆವ ಮುಳಿವ ದುಶ್ಚರಿತಂಗಳ್||೫||


೧. ಭರ. ಗ. ಚ.
೨. ತೋರ್ಪು. ಗ