ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨

ರಾಮಚಂದ್ರಚರಿತಪುರಾಣಂ

           ನ್ನರಿವಂತುಟನುಳ್ಳ೦ತುಟ
           ನರಿಪುವೆನವಧರಿಪುದೆಂದು ಚರನಿಂತೆಂದಂ||೩೬||

      ಕಂ||ಧನದಾಚಲಕ್ಕೆ ಬಡಗಣ
            ದೆನೆ ವಿಜಯಾರ್ಧಾಚಲಕ್ಕೆ ತೆಂಕಣದೆನೆ ದು||
            ಷ್ಟ ನಿವಾಸಮರ್ಧಪರಮೆಂ
            ಬ ನಾಮದಿಂ ಮ್ಲೇಚ್ಛದೇಶಮಿರ್ಪುದಪಾರಂ||೩೭||

      ಅಲ್ಲಿ ಮಯೂರಮಾಲೆಯೆಂಬ ಶಬರ ಶಿಬಿರಮನಾಳ್ವ ತರಂಗತಮನೆಂಬ ಶಬರ ನಾಯಕಂ ತನ್ನಾಳ್ವನಾಡ ಬೇಡವಡೆಯೆಲ್ಲಮಂ ಕೂಡಿಕೊಂಡು ಕಪೋತ ಕಾಂಭೋಜ
ಕಣಾದಿ ದೇಶಂಗಳಂ ಕಿಡಿಸುತ್ತುಂ ಬ೦ದು--

ಉ|| ನಾಡರಸಂ ತಗುಳ್ದು ತಡೆಗಾಲದ ಮಾರಿಯ ಮೂರಿಯಂತೆ ಕ|
     ಣ್ಗೋಡದೆ ಬಾಲ ವೃದ್ಧ ವನಿತಾ ವಧೆಗೆಯ್ದು ಕವರ್ತೆಗೊಂಡು ಸು||
     ಟ್ಟೋಡಿಸಿ ಜಾತಿಯಂ ಕಿಡಿಸಿ ನಾಡನವಂ ಕಡಿದಿಕ್ಕಿ ಮೆಚ್ಚಿದಂ|
     ಬೇಡರಸಂ ತರಂಗತಮನಾನಿರೆ ಬೇಡರಸೆಂಬ ಗರ್ವದಿಂ||೩೮||

ಎಂದು ಬಿನ್ನವಿಸೆ--

ಕ೦|| ಚರ ವಚನಮನಾಲಿಸಿ ತುಂ
      ಬುರಕೊಳ್ಳಿಯ ತೆರದಿನ೦ಬರಕ್ಕೆ ಸಿಡಿಲ್ದಾ||
      ಹರಿವಂಶಕೇತು ಕಣ್ಣಿಸು
      ಸೆರೆವರಿಯೆ ಕೃತಾಂತನಂತೆ ಮುಳಿದಿಂತೆಂದಂ||೩೯||

ಉ|| ಒಂದೆ ಕುಠಾರದಿಂದಡವಿಯಂ ಕಡಿವಂತಿರೆ ಪೋಡುಗಾರನೆ|
     ನ್ನೊ೦ದೆ ಭುಜಾಸಿಯಿಂ ಶಬರಕೋಟಿಯನಿಕ್ಕಿ ಪಿಶಾಚ ಕೋಟಿಗಾ||
     ನಂದಮನುಂಟುಮಾಳ್ಪೆನುರಿದಾನಿದನೇಳಿಸಿದಂದು ದುರ್ಯಶೋ|
     ದುಂದುಭಿ ನಾದಮಾವರಿಸದಿರ್ಕುಮೆ ಕೂಡೆ ಜಗ೦ಗಳೆಲ್ಲಮಂ||೪೦||

     ಕಂ||ಇರಿಯದೆ ಬೇಡಿದೊಡೀಯದೆ
     ಬರಿದೆ ಕುಲೀನತೆಗೆ ಬೆಸೆದು ಪಾರ್ಥಿವ ಶಬ್ದ||
     ಕೈರೆವಟ್ಟಿನಿಸಿ ಧರಿತ್ರಿಗೆ
     ಪೊರೆಯೆನಿಪಂ ರಾಜ ನಾಮಧಾರಕನಲ್ತೇ||೪೧||


೧. ಕನಕಾ. ಚ. ;
೨. ಪುರ, ಗ.
೩. ; ಣ್ಣಾಡದೆ. ಚ.