ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪

ರಾಮಚಂದ್ರ ಚರಿತಪುರಾಣಂ

    ಕಂ||ಇದು ಮಂತ್ರಾಲೋಚ೦ಬರ
         ಮುದಾತ್ತಮಣಮಲ್ತು ಮಿಥಿಳೆಯ೦ ಜನಕನುಮಂ||
         ಬೆಪರಿಸಿ ಜಾನಕಿಯಂ ತ
         ರ್ಪುದು ಮಾಲ್ಪುದು ದೇವ ಸುತ ವಿವಾಹೋತ್ಸವಮಂ||೯೯||
    
    ಎನೆ ವಿಯಚ್ಚರೇಂದ್ರನಿಂತೆಂದಂ--
  
    ಕಂ||ಈಯೆ ತರವೇಳ್ಪುದಬಲೆಯ
         ನೀಯದೆ ತಂದಂದು ತನಗದತ್ತಾದಾನಂ||
         ಸ್ತೇಯಮದರಿಂದಮದನ
         ಶ್ರೇಯಮನಾಚರಿಸದಲ್ತೆ ಖೇಚರವಂಶ೦||೧೦೦||

         ಸಮನೆನಿಪನೊಡನೆ ಕೊಳ್ಕೊಡೆ
         ಸಮನಿಸೆ ಸಮದತ್ತಿ ಭೂಚರರ್ ಖೇಚರರೊಳ್||
         ಸಮನಲ್ಲರ್ಸುತಮೋಹದಿ
         ನೆಮಗಮದಶ್ರೇಯಮಾದೊಡಂ ಕರಣೀಯಂ||೧೦೧||
 
    ಎಂಬುದುಮಿಂದುಗತಿ ನಿಯಚ್ಚರೇಂದ್ರಂಗೆ ಕುಲಮಹತ್ತರಂ ಚ೦ದ್ರವರ್ಧನ
ನಿಂತೆಂದಂ--
  
     ಕಂ||ಎರೆದಟ್ಟಿದೊಡೀಯರ್ ಭೂ
          ಚರರೆಂತುಂ ನೀಚರದರಿನಿಲ್ಲಿಗುಪಾಯಾಂ||
          ತರದಿಂ ತಂದೆರೆಯೆ ಭಯಾ
          ತುರಂ ನಿಜಾತ್ಮಜೆಯನೀವೊಡೀವಂ ಜನಕಂ||೧೦೨||

     ಎಂಬುದುಮಾಬೆಸನಂ ಚಪಲವೇಗನೆಂಬ ವಿದ್ಯಾಧರಂ ಬೇಡಿಕೊಂಡು--

      ಕಂ||ಗಗನೇಚರ ತೇಜಶ್ಯಿಖಿ
           ಪಗೆವರ ಭಾಸುರ ಯಶೋ ವಿತಾನಮನುರಿಪಲ್||
           ನೆಗೆದುದೆನೆ ಚಪಲವೇಗಂ
           ನೆಗೆದಂ ಗಗನಕ್ಕೆ ವಿಜಿತ ಚಪಲಾವೇಗಂ||೧೦೩||

           ಭೋಂಕನೆ ಬಡಗಣ ದೆಸೆಯಿಂ
           ತೆಂಕಣದೆಸೆಗಾಗಿ ನಡೆದುದುಳ್ಕಮಿದೆಂಬಾ||
           ಶಂಕೆಯನೊಡರಿಸಿ ಮಿಥಿಲೆಗೆ
           ಶಂಕಿತನಾ ಖಚರನಿಳಿದನಂಬರ ತಳದಿಂ||೧೦೪||


೧. ಗುಣ. ಚ.