೯೪
ರಾಮಚಂದ್ರ ಚರಿತಪುರಾಣಂ
ಕಂ||ಇದು ಮಂತ್ರಾಲೋಚ೦ಬರ
ಮುದಾತ್ತ೧ಮಣಮಲ್ತು ಮಿಥಿಳೆಯ೦ ಜನಕನುಮಂ||
ಬೆಪರಿಸಿ ಜಾನಕಿಯಂ ತ
ರ್ಪುದು ಮಾಲ್ಪುದು ದೇವ ಸುತ ವಿವಾಹೋತ್ಸವಮಂ||೯೯||
ಎನೆ ವಿಯಚ್ಚರೇಂದ್ರನಿಂತೆಂದಂ--
ಕಂ||ಈಯೆ ತರವೇಳ್ಪುದಬಲೆಯ
ನೀಯದೆ ತಂದಂದು ತನಗದತ್ತಾದಾನಂ||
ಸ್ತೇಯಮದರಿಂದಮದನ
ಶ್ರೇಯಮನಾಚರಿಸದಲ್ತೆ ಖೇಚರವಂಶ೦||೧೦೦||
ಸಮನೆನಿಪನೊಡನೆ ಕೊಳ್ಕೊಡೆ
ಸಮನಿಸೆ ಸಮದತ್ತಿ ಭೂಚರರ್ ಖೇಚರರೊಳ್||
ಸಮನಲ್ಲರ್ಸುತಮೋಹದಿ
ನೆಮಗಮದಶ್ರೇಯಮಾದೊಡಂ ಕರಣೀಯಂ||೧೦೧||
ಎಂಬುದುಮಿಂದುಗತಿ ನಿಯಚ್ಚರೇಂದ್ರಂಗೆ ಕುಲಮಹತ್ತರಂ ಚ೦ದ್ರವರ್ಧನ
ನಿಂತೆಂದಂ--
ಕಂ||ಎರೆದಟ್ಟಿದೊಡೀಯರ್ ಭೂ
ಚರರೆಂತುಂ ನೀಚರದರಿನಿಲ್ಲಿಗುಪಾಯಾಂ||
ತರದಿಂ ತಂದೆರೆಯೆ ಭಯಾ
ತುರಂ ನಿಜಾತ್ಮಜೆಯನೀವೊಡೀವಂ ಜನಕಂ||೧೦೨||
ಎಂಬುದುಮಾಬೆಸನಂ ಚಪಲವೇಗನೆಂಬ ವಿದ್ಯಾಧರಂ ಬೇಡಿಕೊಂಡು--
ಕಂ||ಗಗನೇಚರ ತೇಜಶ್ಯಿಖಿ
ಪಗೆವರ ಭಾಸುರ ಯಶೋ ವಿತಾನಮನುರಿಪಲ್||
ನೆಗೆದುದೆನೆ ಚಪಲವೇಗಂ
ನೆಗೆದಂ ಗಗನಕ್ಕೆ ವಿಜಿತ ಚಪಲಾವೇಗಂ||೧೦೩||
ಭೋಂಕನೆ ಬಡಗಣ ದೆಸೆಯಿಂ
ತೆಂಕಣದೆಸೆಗಾಗಿ ನಡೆದುದುಳ್ಕಮಿದೆಂಬಾ||
ಶಂಕೆಯನೊಡರಿಸಿ ಮಿಥಿಲೆಗೆ
ಶಂಕಿತನಾ ಖಚರನಿಳಿದನಂಬರ ತಳದಿಂ||೧೦೪||
೧. ಗುಣ. ಚ.