ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಷ್ಟಮಾಶ್ವಾಸಂ

೨೦೫

ನೆಂಬುದುಂ ಲಕ್ಷ್ಮಣನದರ್ಕಾನೆ ಸಾಲ್ವೆನೆಂದು ಮನಃಪವನ ಜವವುಳ್ಳ ನಾಜಿಗಳಂ
ಪೂಡಿದ ರಥಮಂ ತರಿಸಿ ಮಾವರುಮೇಲ ಪೋಗಿ ನಂದ್ಯಾವರ್ತ ನಗರದ ಪೋಲಿ
ವೋಟಿಲೊಳ್ ಬೀಡಂ ಬಿಟ್ಟಿರ್ದ ಸಮಯದೊಳ್ –

ಕಂ || ಅತಿವೀರನ ಶೌರಮನ
ಪ್ರತಿಹತವಂ ಭರತನಾರ್ ಕುಮಾಳಿಂ ಗೆಲಲು ||
ದೃತನಂ ಮುನ್ನ ಮೆ ರಣದೊಳ್
ಹತಪ್ರಭಂ ಮಾಡಿ ಗೆಲ್ವ ಬಗೆಯಂ ಬಗೆಯಿಂ || ೨೧ ||

ಎನೆ ಜನಕಜೆಗೆ ಮುಕುಲಿತ ಕರ ಸರೋಜನಾಗಿ -
ಕಂ || ಜನನಿ ಬಜಗಳವನಂ
ಮನೆದೊಯ್ಲೆಂ ಪಿಡಿದು ತರ್ಸ ತೆಆದಿಂ ತಂದ ||
ಣ್ಣನ ಕಾಲ್ ಆಗಿಸುವೆಂ ಬಗೆ
ವನಿತುವರಮದಾವ ಗಹನವೆಂದನುಪೇಂದ್ರಂ ||೨೨ ||

ಎನೆ ರಾಘವಂ ಕೇಳು ಭರತ೦ಗತಿವೀರನಂ ನಿಯಮಿಸುವುದಾವ ಗಹನ
ಮನೆ ಲಕ್ಷ್ಮಣನೆತಾನುಂ ಭರತನುಂ ಸೋನಪ್ರೊಡೆ ನಮಗೆ ಕುಲಪರಿಭವ
ಮಕ್ಕು ಮೆಂಬುದುಂ ರಾಘವನೆಂದನಿಂದಿಂಗೆ ಮೂಆನೆಯ ದಿವಸದಂದು ಶತ್ರುಘ್ನಂ
ನಂದ್ಯಾವರ್ತಪುರಕ್ಕೆ ಸರಿಯಿಟ್ಟು ಪಲಬರರಸುಮಕ್ಕಳಂ ಕೊಂದು ಪೋವೋಡಿ
ಲೊಳಿರ್ದೆಲಾ ಜಾನೆಯುಮನಲುವತ್ತು ಸಾಸಿರ ಕುದುರೆಯುಮಂ ಪಿಡಿದುಯ್ಯ
ನೆಂದು ಪೇಚ್ಚು ದುಂ ಮಜುದೆವಸಂ ಪುರಮಂ ಪೊಕ್ಕೊ೦ದು ಜಿನಮಂದಿರದೊಳಾಯುಧ
ಸಮೇತಂ ಸೀತೆಯುಮಂ ರಘುವೀರನುಮನಿರಿಸಿ ಬಂದು-

ಚ || ಅದಟನತಿ ಪ್ರಚಂಡ ಬಲನೆನ್ನದೆ ದುರ್ಧರ ದೋಸ್ಸಹಾಯದಿ೦ |
ಕದನ ಧುರೀಣನೊಲ್ಲದೆ ಧುನುರ್ಲತೆಯಂ ನಿಜ ದಿವ್ಯ ಬಾಣಮಂ ||
ಗದೆಯನದೇನುದಾನೊ ಜನಾರ್ದನನೊರ್ವನೆ ಪಾಶ ದಂಡಮಿ |
ಲ್ಲದ ಜವನಂತೆ ನಿಂದನತಿವೀರನ ರಾಜಗೃಹೋಪಕ೦ಠದೊಳ್ || ೨೩ ||

ಆಗಳಲ್ಲೋದರನಿದಿರ್ಗೆ ಬಂದಾಗಮನ ವೃತ್ತಾಂತವನಜದು-

ಕಂ || ಪಡಿಯಅನೊರ್ವ೦ ಬಂದಾ
ಗಡೆ ಭರತನ ದೂತನಿರ್ದಪ೦ ಬಾಗಿಲೋಳೆಂ ||
ದೊಡೆ ಬರವೇಣಿಂದಂ ಬಳಿ
ಸಿಡಿಲಂ ಬಲಿಯಟ್ಟಿ ಬರಿಸುವಂತತಿವೀರಂ || ೨೪ ||