ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮ ರಾಮಚಂದ್ರ ಚರಿತಪುರಾಣಂ ಚ | ತನಗಿದಿರಾದ ಪರ್ವಲಮನೊರ್ವನೆ ಲಕ್ಷ್ಮಣನಾಂತು ಕಾದೆ ತ | ನ ರಣಮಂ ನಿರೀಕ್ಷಿಸಲಪೇಕ್ಷಿಸಿ ಪೋಗೆ ಪರೋಕ್ಷದೊಳ್ ದಶಾ | ನನನೆಂರೆತಂದನಾಂ ಜನಕನಂದನೆಯೆಂ ರಘುವೀರನಪ್ಪ ರಾ | ಮನ ವಧು ಸೀತೆಯೆಂ ಪತಿವಿಯೋಗ ಕೃಶಾನು ಸುಡಲೆ ಬೆಂದವೆಂ || ೧೯೧ !! ಎನೆ ವಿಭೀಷಣಂ ನೈಮಿತ್ತಿಕಾದೇಶಮಂ ನೆನೆದು ಭಯ ಚಕಿತ ಚಿತ್ತನಾಗಿ--- ಕ೦ ! ಪರ ಪರಿಗೃಹೀತೆಗ ಜಿಪಂ ತರೆ ಪುರುಷಂ ಪುರುಷ ಧರ್ಮಮ೦ಗುಂ ಪಂಗುಂ || ಧರೆ ದುರ್ಗತಿ ಸಮನಿಸುಗುಂ ಪರಿಹರಿಸುವುದಾರುಮದಲಿ ನೀ ದುರ್ಣಯವುಂ !! ೧೯೨ | ಎಂದು ಬಿನ್ನವಿಸೆ ಮಾರೀಚನುವದನೆ ನುಡಿಯೆ ಕ೦ 11 ಸ್ತ್ರೀ (ರತ್ನ ಕ್ಲಾಸಿರೆ ಪೆ ರಾರೊಡೆಯರ್ ಮಾಜವನ್ನರಾರೆ ದು !! ರ್ವಾರ ಭುಜ ಬಲವನೆಂದವಿ ಚಾರಿ ದಶಗ್ರೀವನವರ ನೇಳಿಸಿ ನುಡಿದಂ || ೧೩ || ಅ೦ತು ನುಡಿದು ದಾನವಂ ತ್ರಿಜಗವ್ಯೂಷಣ ವಾನಗಜಮನೇಲಿ ಜಾನಕಿ ಯಂ ಪುಷ್ಪಕ ವಿಮಾನವನೇಜಿಸಿ ನಿಖಿಲ ಸಾಮಂತ ಸೇನೆ ಮುಂದೆ ಪರಿಯೆ ಪುರ ಶ್ರೀ ವಿಲಾಸನಂ ತನಗೆ ತೋರ್ಪುದು ಉ || ಜಾನಕಿ ಜೀವಿತೇಶ್ವರನಗಲೈಯೊಳಗ್ಗಳವಾದ ಖೇದದಿ೦ || ದೇನುನಸಹಮಾಗೆ ಪುರನಂ ಪುರ ಗೋಪುರವಂ ಬಹಿಃಪುರೋ || ದ್ಯಾನವನೀಕ್ಷಿಸಲ್ ಬಗೆ ವಿರೂಕ್ಷ್ಮೀಸೆ ಕನ್ನಡಿಸಿ ಸಾಳ | ಜ್ಞಾನನೆ ದುಃಖ ತೇ ಮನಸಿ ಸರ್ವಮಸಹ ಮೆನಿಪ್ಪ ವಾಕ್ಯಮಂ || ೧೯೪ || ಅ೦ತು ರಾಮಸೀಮಂತಿನಿಯಂ ಪ್ರಮದ ಮದಿರಾ ಪ್ರಮಾಂ ಪ್ರಮದವನ ದೊಳ್ ಸೆಜಿಗೆಯು ವಿರಹ ವಿಕಲನಾಗಿರ್ಪುದುಮಾತನ ಕೇಡಂ ವಿಭೀಷಣಂ ಕಂಡು ಭಯಂಗೊಂಡು ಮಂತಣಮಿರ್ದ ಸಮಯದೊಳ್ ಸ೦ಭಿನ್ನ ವೆಸರ ಮಂತ್ರಿ ಮುಖ್ಯಂ ದಿಗ್ಗಜದ ನಿಗ್ಗವನನುಡಿವಂತೆ ವಿಯಚ್ಚರ ಪತಿಯ ನಚ್ಚಿನ ಖರ ದೂಷಣರಂ ಕೊಂದು ತದಪತ್ಯನಪ್ಪ ಸುಂದರನಂ ಪಾತಾಳಲಂಕೆಯಿಂ ಸೊದು ಕಳೆದು ತದ್ವಿರೋಧಿಯಪ್ಪ ವಿರಾಧಿತನನನ್ವಯಾಗತ ರಾಜ್ಯಲಕ್ಷ್ಮಿಯೊಳ್ ನಿಲಿಸಿ ರಾಮಲಕ್ಷ್ಮಣರ್ ವೈದೇಹಿಯ ಪೋದ ದೆಸೆಯನ ಆಿಯದುಸಿಕನಿರ್ದರಲ್ಲದೆಯುಂ ವಿಗ್ರಹ ಸಮಗ್ರನಪ್ಪ ಸುಗ್ರೀವಂ