ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೩೦೩ ಅಂತು ಶುಭಪರಿಣಾಮದಿಂ ದಶಮುಖನೊಳಪ್ಪ ಕಲುಷವಿಲ್ಲದೆ ಕೈಲಾಸ ಶಿಖರಮಂ ಮೆಲ್ಲನೆ ಪುಯ್ಯಲಿಡುವ ಸರಮಂ ಕೇಳು ಕಂ|| ಹರಿಜನ ಸಹಿತಂ ಮಂಡೋ ದರಿ ಬಂದು ಮುನೀಂದ್ರ ರಕ್ಷಿಸೆಂದೆಂಗುವುದುಂ | ಚರಣಾಂಗುಷ್ಕ ಮನೊಯ್ಯನೆ ಕರುಣಾರಸ ಸಹಿತನೆತ್ತಿದಂ ಮುನಿವಹಿತಂ ಆಗಳಾ ಪುಯ್ಯಲ್ಕುವ ರವಮೇ ಕಾರಣವಾಗೆ ದಶಮುಖಂಗಂದಿ೦ದಿತ್ತ ರಾವಣನೆಂಬ ಹೆಸರಾಯ್ತನಂತರಮಾತಂ ರಸಾತಲದಿಂ ಪೋಣಮಟ್ಟು ವಾಲಿಭಾರ ಕರಂ ಪೂಜಿಸಿ ಪೊಡೆವಟ್ಟು ತನ್ನ ಪೊಲ್ಲಮೆಯಂ ಕ್ಷಮೆಗೊಂಡು ಕಳೆದು || ೧೭ || ಚ || ಕೆಲದ ಜಿನೇಶ್ವರಾವಸಥಮಂ ಬಲಗೊಂಡೊಳಪೊಕ್ಕು ದೇವನಂ | ವಿಲಸಿತ ರತ್ನರಾಶಿಗಳಿನರ್ಚಿಸಿ ಬಾಜಿಸಿದ ಲಯತ್ರಯಂ | ಸುಲಲಿತಮಾಗೆ ವಸ್ತು ಗುಣ ರೂಪ ಜಿನಸ್ತನನಾಂಕ ಮಾಲೆಯಂ | ಫಲತೆ ಆದಿಂ ರಸ೦ಬಡೆಯೆ ರಾವಣ ಹಸ್ತದಿನಂದು ರಾವಣಂ || ೧೭೭ || ಅ೦ತು ನಿರ್ಭರಭಕ್ತಿಯಿಂ ಬಾಜಿಪಾಗಲ್ಲ. ಉ || ಆಸನ ಕಂಪನಾಗೆ ಫಣಿ ಸಂ ಫಣಿಲೋಕದಿನಂದು ಬಂದು ಕೈ | ಲಾಸ ನಗಕ್ಕೆ ರಾವಣನ ದೇವರೊಳಾದ ತಿಭಕ್ತಿ ಹರ್ಷನ೦ || ಮಾಸರವುಂಟುಮಾಡೆ ತನಗಿತನಿದಿರ್ಚಲೊಡಂ ಸಮಸ್ತ ದೇ || ವಾಸುರ ಮುಖ್ಯನಾಯಕರ್ಗೆ ಜೀವ ವಿಮುಕ್ತಿಯನೀವ ಶಕ್ತಿಯಂ || ೧೭೮ || ಅ೦ತು ಫಣೀಂದ್ರನೀಯ ದಿವ್ಯಶಕ್ತಿಯಂ ಪಡೆದು ಪೋದನಿತ್ತಲಪಕೃತಿಯಂ ಗುರುಗಳೊಡನಾಲೋಚಿಸಿ ಕಂ || ಪ್ರಾಯಶ್ಚಿತ್ತ೦ಗೊಂಡ ಶ್ರೇಯಮನಪಹರಿಸಿ ನಾಲಿಮುಸಿ ಶುಕಧ್ಯಾ || ನಾಯತ್ತನಾಗಿ ಮುಕ್ತಿ ಶ್ರೀ ಯುವತಿಯ ನಿಬಿಡ ಕುಚಮನಾಲಿಂಗಿಸಿದಂ || ೧೭೯ || ಮತ್ತಿತ್ತ ರಾವಣಂ ನಂದ್ಯ ಕಾ ಸುವೇಲಾದಿ ದ್ವೀಪಂಗಳನಾಳ್ಳ ಮಹಾಬಲ ವಿಜ್ಞಾನಧರರಂ ಬಾಯ್ಕಳಿಸಿ ಕುಂಭಕರ್ಣ ವಿಭೀಷಣರುಮಿಂದಗಿ ಮೇಘವಾಹನರುಂ ಖರ ಮರೀಚಿ ಸುಗ್ರೀವಾಂಗದ ಮರ್ಕಟದ ಜ ಪ್ರಮುಖ ನಿಖಿಲ ವಿದ್ಯಾಧರ ಪರಮೇ