ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೫೧ ದುದು ಪರಿಷಜ್ಜನಕ್ಕೆ ಪರಮೋತ್ಸವವಾದುದು ಲಕ್ಷಣಂಗೆ ಕೊ | ರ್ವಿದುದು 'ಮನಂ ಮುದ೦ಬಡೆಯರಾರಭಿವಾಂಛಿತ ಕಾರ್ಯ ಸಿದ್ಧಿಯಿಂ || ಅಂತು ನಿಜಾಗಮನಮೆ ಸಭಾಜನನಂ ಹರ್ಷರಸ ಭಾಜನಮಂ ಮಾಡೆಚ | ಪುದಿದಿರೆ ರಾಮಲಕ್ಷ್ಮಣರ ಕಣೋಳೆಪುಂ ಬಳಸಿರ್ದ ತತ್ವಭಾ | ಸದರ ವಿಲೋಚನ ಪ್ರಭೆಯುಮಾತ್ಮ ಶರೀರವನಂಜನಾ ಸುತಂ !! ವಿದಲಿತ ನೀಲನೀರಜ ವನಂ ನಡೆತಂದಪುದೆಂಬಿನಂ ಸಭಾ | ಸದನಮನೆಯಿ ದಂ ಸಲಿಲ ವೀಚಿಗಳಂ ಗೆಲೆ ಭೂಷಣಾ೦ಶುಗಳ್ !! ೧೬೩ || ಅಂತು ಬಂದು ರಾಘವಂಗೆ ವಿನಯ ವಿನಮಿತನಾಗಿ ಲಕ್ಷಣಂಗೆ ತುಟಿ ಲೈಯು ಸಮುಚಿತ ಪ್ರದೇಶದೊಳಿಕ್ಕಿದುತ್ತುಂಗ ಮಣಿಮಯಾಸನಮನಲಂಕರಿಸಿ ಕಂ !! ಮಣಿಯೆ ವಿರಹಾ೦ಧಕಾರಂ ಕುಣಿಯೆ ಜಗತ್ಪತಿಯ ನೇತ್ರ ಪುತ್ರಿಕೆ ಮೆಯ್ಯೋಳ್ || ಪೆಣೆಯ ಪುಲಕಾಳಿ ಚೂಡಾ ಮಣಿಯಂ ಕೊಟ್ಟಂ ನೃಪಂಗೆ ಪವಮಾನ ಸುತಂ || ೧೬೪ || ಅ೦ತು ಕುಡುವುದುಶಾ 1 ಆ ರತ್ನಕ್ಕಿದಿರ್ವಪ್ರವೋಲ್ ನೃಪತಿ ಗಾನಂದಾಶ್ರುಗ ಬಂದುವಾ ! ಸ್ತ್ರೀರತ್ನಂ ಪದೆದಪ್ಪಿದಂತೆ ಪುಲಕಂ ಚೂಡಾಮಣಿ ಸ್ಪರ್ಶದಿಂ ॥ ಧೀರೋದಾತ್ತನ ಮೆಯೊಳುದುವು ಸೀತಾ ಶುದ್ದಿ ಯಂ ಕೇಳ್ವ ಚೇ ! ತೋರಾಗಂ ರಘುನಂದನ ಶ್ರುತಿಗೆ ತ೦ದತ್ತಾಗತ್ಸುಕಮಂ || ೧೬೫ || ಅನಂತರಂ ಮರುನ್ನಂದನಂ ಬಿನ್ನಪವನವಧಾರಿಸುವುದೆಂದಿಂತೆಂದಂಕಂ || ಘನಸಮಯ ಸಮಾಗಮಮ೦ ಮನದೊಳ್ ನೆನೆಯುತ್ತು ಮಿರ್ಪ ಚಾದಗೆವೊಲ್ ಮ || ಜನನಿ ನಿಜಾಗಮನಮೆ ಜೀ ವನವಾಗಿರೆ ದೇವ ಜೀವಮಂ ಪಿಡಿದಿರ್ದಲ್ || ೧೬ || ಉ 1 ದೇವ ಪತಿ ವ್ರತಾ ಗುಣದಿನಗಳವಾವುದುಮುಂಟೆ ಜಾನಕೀ | ದೇವಿಗೆ ರಾವಣಂ ಮುಳಿದು ಮಾಲ್ಪು ಪಸರ್ಗಮವನ್ನನಾದೊಡಂ || 1. ಮನೋಮುರ್ದ ಪಡೆವರಾರಭಿವಾ೦ಛಿತ ಕಾರ್ ಸಿದ್ದಿಯಂಕ, ಖ, ಘ ಚ ; ..ಸಡಯರಾ.. ಗ.