ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೨ ರಾಮಚಂದ್ರಚರಿತಪುರಾಣಂ ಕಂ || ಜಾನಕಿಯಿರ್ದೆಡೆಯ ಹಿಂ ಸಾನಂದಂ ತಿಳಿದು ನಾರದಂ ಬಂದು ನಭೋ || ಯಾನದೊಳೆ ವಜ್ರಜಂಘ ಮ ಹೀನಾಥನ ಪುಂಡರೀಕಪುರಮಂ ಪೊಕ್ಕಂ || ೬ || ಅಂತು ಪುರಮಂ ಪೊಕ್ಕು ಲವಾ೦ಕುಶರಂ ಕಾಣ್ಡು ದುವವರಿಚ್ಚಾ'ಕಾರಂಗೆಯು ಮಣಿಮಯಾಸನಮಂ ಕುಡುವುದುಂ ರಾಮಲಕ್ಷ್ಮಣರಂತೆ ಮಹಾನುಭಾವರಾಗಿ ಮೆಂದು ಪರಸುವುದು ಕಂ || ಅವರ ಕುಲವಾವುದವರಾ ನವನೀವಲ್ಲಭ ತನೂಭವ‌ ಪೌರುಷ ಮೇ ! ನವರ್ಗೆ೦ದತಿ ಕೌತುಕದಿಂ ಲವಾ೦ಕುಶರ್ ಮಾಯಜೋಗಿಯಂ ಬೆಸಗೊಂಡರ್ || ೬ || ಅ೦ತು ಬೆಸಗೊಳ್ಳುದುಂ ನಾರದನಿಂತೆಂದನವರಿಕ್ಷಾಕು ವಂಶದ ದಶರಥ ಮಹೀನಾಥನ ತನೂಭವರ್ ಜನಕನ ಮಗಳಪ್ಪ ಸೀತಾದೇವಿ ರಾಮದೇವರ ಮಹಾ ದೇವಿಯಾಗಿ ಸುಖ ಸಂಕಥಾ ವಿನೋದದೊಳಿರಲೊಂದು ದಿವಸಂ ದಶರಥ ಮಹಾ ರಾಜಂ ವೈರಾಗ್ಯ ಪರನಾಗಿ ದೀಕ್ಷೆಗೊಳಲುದ್ಯೋಗಂಗೆಯು ರಾಮನಂ ಕರೆದು ರಾಜ್ಯ ಪಟ್ಟಮಂ ಕಟ್ಟಲೆಂದಿರ್ಪುದುಮಾ ಸಮಯದೊಳ್ ಕೈ-ಕಾಮಹಾದೇವಿಯದಂ ಕೇಳ್ಳು ಬೇಗಂ ಒಂದು ದೇವರೆನಗೆ ಕಾರುಣ್ಯಂಗೆಯ್ದ ಮೆಚ್ಚಂ ದಯೆಗೆಯ್ಯುದೆಂದು ಬಿನ್ನಪಂಗೆಯ ದುಂ ತಪೋವಿಘ್ನಮಪ್ಪುದು ಪೊಆಗಾಗೆ ನಿನ್ನ ಮೆಚ್ಚಿದುದಂ ಬೇಡಿ ಕೊಳ್ಳೆಂಬುದುಂ ಭರತ೦ಗೆ ರಾಜ್ಯ ಮಂ ಕುಡುವುದೆನೆ ವಿಸ್ಮಯ ಚಿತ್ತನಾಗಿ ದಶರಥ ನೊಂದುಮುಂ ನುಡಿಯಲಜಿಯದಿರ್ಪುದುಂ ತಂದೆಯ ನನ್ನಿಯಂ ಪಾಲಿಸಲೆಂದು ರಾಮಸ್ವಾಮಿ ಭರತಂಗೆ ರಾಜ್ಯ ಮತ್ತು ದಂಡಕಾರಣ್ಯದೊಳಿರೆ ರಾವಣಂ ಸೀತಾ ದೇವಿಯಂ ಕ೦ಡಾಸಕ್ತನಾಗಿ ತನ್ನ ಕುಲಾಚರಣಂಗೆಟ್ಟು ಕಟ್ಟು ಕೊಂಡು ಪೋದ ನಂದಾ ವೃತ್ತಾಂತವನಾದ್ಯಂತ ಮೆಯ್ದೆ ಪೇಯ್ದು ಮತ್ತೆ ವಿಂತೆಂದಂ ರಾಮಲಕ್ಷ್ಮಣ ರಜಿದು ಸಮಸ್ತ ವಿದ್ಯಾಧರ ಸಹಿತ ಸುಗ್ರೀವ ಪ್ರಭಾಮಂಡಲ ಹನುಮತ್ಸಹಿತರಾ ಗೆ ಪೋಗಿ ರಾವಣನಂ ಕೊಂದು ತ್ರಿಖಂಡ ಮಂಡಲಾಧಿಪತಿಗಳಾಗಿ ವಿಭೀಷಣಂಗೆ ಲಂಕೆಯ ರಾಜ್ಯ ಪಟ್ಟಂಗಟ್ಟಿ ದಿಗ್ವಿಜಯಮಂ ಸಾಧಿಸಿ ಮಗುಟ್ಟು ಬಂದು ಅಯೋಧ್ಯೆ ಯೊಳ್ ಸುಖದಿಂ ರಾಜ್ಯಂಗೆಯ್ಯುತ್ತು ಸಿರಲೊಂದು ದಿವಸಂ ರಾಮಂಗೆ ಜನಪದ ಜನಂಗಳ್ ಸೆರೆದು ಬ೦ದು ಸೀತಾದೇವಿಯನೊಳಕೊಂಡಿರಲಾಗದೆಂದಪವಾದನಂ ಪೊರ್ದಿಸಿ ನುಡಿಯೆ ಲಕ್ಷ್ಮೀಧರನಂ ಕರೆದು ಕಟ್ಟಿಕಾಂತದೊಳ್ ಪೇಜತೆ ಲಕ್ಷ್ಮಿ ಧರಂ ಸೀತಾದೇವಿ ಮಹಾಸತಿಯುಂ ಗುಣವತಿಯುಮಪ್ಪುದರಿ೦ದೀಗ ನುಡಿ