ಪುಟ:ರಾಯಚೂರು ವಿಜಯ ಭಾಗ ೧ .djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6ಯರು ವಿಜಯ ಬ | ವಿನೋದವನ್ನು ಹೆಚ್ಚಿಸುತ್ತಿದ್ದನು. ವೇಷವನ್ನು ಧರಿಸುವುದಕ್ಕೆ ಹುಚ್ಚನಿಗೆ ಬಹಳ ಪ್ರಯಾಸವೂ ಇರುತ್ತಿರಲಿಲ್ಲ. ಅವನ ಅಭಿಪಂ ಯವು ತಿಳಿದ ಕೂಡಲೆ ಹುಡುಗರು ತಕ್ಕ ಸಾಮಗ್ರಿಗಳನ್ನು ಒದಗಿಸಿಬಿಡುತ್ತಿದ್ದರು. ಒಂದುದಿನ ಶುದ್ದ ಪ್ರೋತ್ರಿಯನ ವೇಷವನ್ನು ಹಾಕಿಕೊಳ್ಳುವನೆಂಬ ಸೂಚ ನೆಯು ತೋರಿದಕೂಡಲೆ ಒಬ್ಬ ಹುಡುಗನು ತನ್ನ ಮನೆಯಿಂದ ಹಳೆಯ ಮಡಿಪಂಚೆಗಳನ್ನೂ, ಇನ್ನೊಬ್ಬನು ವಿಭೂತಿಯನ್ನೂ, ಮತ್ತೊಬ್ಬನು ರುದ್ರಾಕ್ಷ ಮಾಲೆಯನ್ನೂ ತಂದು ಒದಗಿಸುತ್ತಿದ್ದರು. ಒಬ್ಬನು ಹಳೆಯ ಗೋಣಿಚೀಲವನ್ನು ತಂದು ಹರಿದು ದರ್ಭಾಸನವನ್ನು ಏರ್ಪಡಿಸುತ್ತಿದ್ದನು. ಇನ್ನೊಬ್ಬನು ಉಳಿದ ಪರಿಕರಗಳನ್ನು ತಕ್ಕ ಹಾಗೆ ಅಳವಡಿಸುತ್ತಿದ್ದನು. ತ್ರಿಯನಿಗೆ ತಕ್ಕ ಸಹೃಭಾಷೆಯ ಹುಚ್ಚನಿಗಿದ್ದಿತು. ದಿಗಂಬರ ನಾಗಿದ್ದ ಹುಚ್ಚನು ಹೀಗೆ ಅತ್ಯಲ್ಪ ಕಾಲದಲ್ಲಿಯೇ ಹದಿನಾರು ಆಣೆಯ ಕ್ರಿಯನಾಗಿ ಮಾರ್ಪಡುತ್ತಿದ್ದನು. ಹುಡುಗರು ತಮ್ಮ ಹುಡುಗಾಟಿಕ ಯನ್ನು ಕಂಡು ತಾವೇ ಹಿಗ್ಗಿ ಹೋಗುತ್ತಿದ್ದರು. ಒಂದು ದಿನ ಈ ಹುಚ್ಚನು ಘೋತ್ರಿಯವೇಷವನ್ನು ಧರಿಸಿ ವಿಜಯ ನಗರದಲ್ಲಿ ಸುತ್ತುತ್ತಲಿದ್ದನು ; ಎಲ್ಲಿಗೆ ಬೇಕಾದರೂ ಹೋಗಲು ಅವನಿಗೆ ಅವಕಾಶವಿದ್ದುದರಿಂದ, ಮೊದಲು ಅರಮನೆಯ ಕಡೆಗೆ ಹೊರಟನು. ಅಲ್ಲಿ. ಸ್ವಲ್ಪಹೊತ್ತು ವಿನೋದವನ್ನುಂಟುಮಾಡಿ ಬಳಿಕ ಮಂತ್ರಿಸದಸವನ್ನು ಪ್ರವೇಶಿಸಿದನು. ಹುಚ್ಚನಾದರೂ ಇವನಲ್ಲಿ ಒಂದು ಜಾಣತನವಿದ್ದಿತು : ಇವನು ಯಾರಮನೆಯನ್ನು ಹೊಕ್ಕರೂ ಆಯಾ ಗೃಹಪತಿಗಳು ಕಾರ್ ನಿಮಗ್ನರಾಗಿದ್ದರೆ ಅವರ ಕೆಲಸವಲ್ಲವೂ ಮುಗಿಯುವ ವರೆಗೆ ಕಾದಿದ್ದು ಬಳಿಕ ತನ್ನ 14 ಕಂತೆಪುರಾಣ ” ವನ್ನು ಮೊದಲು ಮಾಡುತ್ತಿದ್ದನು ಲೋಕಜ್ಞಾನಕೂನ್ಯನೂ, ಲಾಭನಷ್ಟವಿವೇಕಹೀನನೂ ಆದ ಈ ಹುಚ್ಚನು ಇದಿರಿಗಿದ್ದರೂ, ಗೃಹಪತಿಗಳು ತಾವು ನಿರತರಾಗಿದ್ದ ಕಠ್ಯಗಳನ್ನಾಗಲಿ, ಸಂಭಾಷಣೆಗಳನ್ನಾಗಲಿ ನಿಲ್ಲಿಸುತ್ತಿರಲಿಲ್ಲ, ಈಗ ಕೇಳಿದ ಮಾತನ್ನು ಉತ್ತರ ಕದಲ್ಲಿಯೇ ಮರೆತುಬಿಡುವ ಹುಚ್ಚನು ಆವರಿ ರಹಸ್ಯವನ್ನು ಕಟ್ಟಿ ಕೊಂಡು ಏನುಮಾಡುವನು ? ಒಂದುವೇಳೆ ತಿಳಿದುಕೊಂಡರೂ ಇತರರಲ್ಲಿ ಇವನು ಹೇಳಿದರೆ, ಇವನ ಉನ್ನತಪ್ರಲಾಪಕ್ಕೆ ಯಾರು ೪ ಮಾಡು