ಪುಟ:ರಾಯಚೂರು ವಿಜಯ ಭಾಗ ೧ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಐ - ೪ ೧ ಬಂದುಗಂಟೆಯೊಳಗಾಗಿ ತಂದುಕೊಡುವೆನೆಂದು ಹೇಳಿ ಹೊರಟುಹೋದನು. ವಿಜಯಸಿಂಹನಿಗೆ ತಾನು ಯೋಚಿಸುತಿದ್ದ ವಿಷಯವು ಬಹಳ ಮನೋಹರ ವಾಗಿದ್ದುದರಿಂದ ಉಂಗುರದ ಸಂಗತಿ ಅಷ್ಟು ಮುಖ್ಯವಾಗಿ ಕಂಡುಬರಲಿಲ್ಲ. ಆದಕಾರಣ ರಾಜಭಟನು ಹೊರಟುಹೋದಕೂಡಲೆ ತನ್ನ ಮುಗಿಲು ಮಾಳಿಗೆಯನ್ನು ಪುನಃ ಕಟ್ಟಿಕೊಳ್ಳಲಾರಂಭಿಸಿದನು ಅದರಲ್ಲಿ ಬಗೆಬಗೆ ಯಾಗಿ ವಿಹರಿಸಿಕೊಳ್ಳುತ್ತಿರಲು ರಾತ್ರಿ ಬಹಳ ಹೊತ್ತು ಆಯಿತು. ಆಗ ಯಾರೋ ಬರುತ್ತಿದ್ದ ಶಬ್ದವಲು, ವಿಜಯಸಿಂಹನು ಸದ್ದು ಕೇಳಿಬಂದ ದಿಕ್ಕಿಗೆ ನೋಡಲಾರಂಭಿಸಿದನು. ಸ್ವಲ್ಪ ಹೊತ್ತಿನಲ್ಲಿ ಶಸ್ತ್ರಪಾಣಿಗಳಾದ ಹತ್ತು ಮಂದಿ ರಾಜಭಟರು ತನ್ನನ್ನು ಸಮೀಪಿಸುತ್ತಿದ್ದುದು ಕಂಡುಬಂತು. ಇವರನ್ನು ನೋಡಿ ಮೊದಲು ತಾನು ತಪ್ಪಿಸಿಕೊಂಡು ಬಂದುದಕ್ಕಾಗಿ ಪುನಃ ತನ್ನನ್ನು ಹಿಡಿದುಕೊಂಡುಹೋಗಲು ಬCತ್ತಿರುವ ಶತ್ರುಭಟರೇನೋ ಎಂದು ಭಾವಿಸಿ, ಪಕ್ಕದದ ತನ್ನ ಘೋರತನಕೃಪಾ€ವನ್ನು ಹಿರಿದು ಕೈಯ್ಯಲ್ಲಿ ಧರಿಸಿ ಕುಳಿತುಕೊಂಡಿದ್ದನು. ಅಷ್ಟರಲ್ಲಿ 2: ಭಟರು ವಿಜಯಸಿಂಹನನ್ನು ಸವಿಾಪಿಸಿ ಆತನಿಗೆ ನನ) ತೆಯ.೦ದ ವಂದಿಸಿ ದೂಭದಲ್ಲೆ ನಿಂತುಕೊಳ್ಳಲು, ರಾಜದ್ರೋಹಿಗಳು -'ನೋ ಹಿಡಿದುಕೊಂಡು ಬರಬೇಕೆಂದು ಮಹಾ ರಾಜರು ತನಗೆ ಸಿ.ತಮಿಸಿJಹುದೆ:ರೂ, ತನ್ನ ಸಹಾಯಕ್ಕಾಗಿ ಅವರನ್ನು ಕಳುಹಿಸಿರಬಹುದೆಂದೂ ಭಾವಿಸಿ: ಈ ಮೆರೆಗೆ ಸಂಭಾವಿಸಲಾರಂಭಿ ಸಿದನು :- ವಿಜಯ- ನೀವು ಯಃ ? ಇಂತಹ ಹೊತ್ತಿನಲ್ಲಿ ಆಯುಧಹಸ್ಯ ರಾಗಿ ನನ್ನ ಮನೆಗೇಕೆ ಒಂದಿ.ವಿರಿ ? ಹೀಗೆಂದ: ಕೇಳಿದನು ಆ ಭಟರ ನಾಯಕನು “ ಓ ವೀರಿ'ನೆ. ನಾನು ಕಾರಾಗೃಹಾಧಿಕಾರಿ, ಇವರು ನನ್ನ ಅನುಚರರ., ಚಕ್ರವರ್ತಿಯವರ ಅಪ್ಪಣೆಯಾದುದರಿಂದ ಈ ಅರ್ಧ ರಾತ್ರಿಯಲ್ಲಿ ಇಲ್ಲಿಗೆ ಬರಬೇಕಾಯಿತು.”