ಪುಟ:ರಾಯಚೂರು ವಿಜಯ ಭಾಗ ೧ .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ರಾಯರು ವಿಜಯ ಹೆಚ್ಚಾಗಿದ್ದ ಸ್ಥಳದಲ್ಲಿ ತನ್ನ “ ಬಾಲ” ವನ್ನು ಕಿತ್ತು ಬಿಸಾಡಿ ಕೆಳಕ್ಕೆ ದುಮಿಕಿ ದುರ್ಗವನ್ನು ಪ್ರವೇಶಿಸಿದ್ದನು. ಕಾವಲುಗಾರರೆಲ್ಲರೂ ತಮ್ಮ ತಮ್ಮ ಮನೆಗಳನ್ನು ನೋಡಿಕೊಳ್ಳುವುದಕ್ಕಾಗಿ ಕಾಲಿಗೆ ಬುದ್ಧಿ ಹೇಳಿದ್ದರು. ಪ್ರಹರೇಶ್ವರಾದಿಗಳು ತಪ್ಪಿಸಿಕೊಂಡು ಹೊರಟುಹೋಗಿದ್ದುದರಿಂದ ತೃಪ್ತಿ ನಾಗಿ ಸಂಕೇತಸ್ಥಳಕ್ಕೆ ಹೋಗಿ ಅವರನ್ನು ಸೇರಿಕೊಂಡನು. © � ಹದಿನೆಂಟನೆಯ ಪರಿಚ್ಛೇದ. ತತ್ವಾನ್ವೇಷಣ. (F ಕಾಲಕ್ರಮೇಣ ಜಗತಃ ಪರಿವರ್ತ ಮಾನಾ || ಚಕ್ರಾರಸಜ್ ರಿವ ಗಚ್ಛತಿ ಭಾಗ್ಯಪಜ್: 11' ಸ್ವಪ್ನವಾಸವದತ್ಯಾ. ಕಾತ್ಯಂತಂ ಸುಖಮುಪನತಂ ದುಃಖಮೇಕಾಂತತೆವಾ | ನೀಟೈರ್ಗತೃತ್ಯುಪಂಚದಶಾಚಕ್ರ ನೇಮಿಕ್ರಮೇಣ |! ಮೇಘದೂತಃ |[. ೪೯, ತಿಮ್ಮರಸನು ವಿಜಯಸಿಂಹನನ್ನು ಕರೆದುಕೊಂಡು ತನ್ನ ಮನೆಗೆ ಹೋದನು, ಮೊದಲು ವಿಜಯಸಿಂಹನು ಅಪರಾಧಿಯೆಂದು ನಂಬಿ ಬಳಿಕ ಅವನನ್ನು ಬಿಡಿಸಿದುದು ಹೇಗೆಂದು ತಿಳಿದುಕೊಳ್ಳಲು ಪ್ರಿಯವಾಚಕರು ಕುತೂಹಲಪಡುತ್ತಿರುವರಲ್ಲವೆ ? ವಿಜಯಸಿಂಹನು ಸನ್ಮಾರ್ಗಿಯೆಂದೂ, ಉದಾರಗುಣೋಪೇತನೆಂದೂ, ಮಂತ್ರಿ ತಿಳಿದಿದ್ದರೂ, ಚಕರ್ತಿಯವರು ಅವನಮೇಲೆ ಆರೋಪಿಸಿದ್ದ ಅಪರಾಧವನ್ನೂ, ಅವರು ಅಪರಾಧಸ್ಥಾಪನೆ ಗಾಗಿ ತೋರಿಸಿದ ನಿದರ್ಶನಗಳನ್ನೂ ನಂಬಲಾರದೆ ಇರಲು ಆಗಲಿಲ್ಲ. ಆದರೂ ಚೆನ್ನಾಗಿ ವಿಮರ್ಶಿಸಿದಹೊರತು ಕೆಲಸಮಾಡಿಬಿಟ್ಟರೆ ಪಶ್ಚಾತ್ತಾಪ ಪಡಬೇಕಾದೀತೆಂದು ಹೆದರಿ, ಚಕ್ರವರ್ತಿಗಳನ್ನು ನಾಲ್ಕು ದಿನಗಳ ಅವಧಿ