ಪುಟ:ರಾಯಚೂರು ವಿಜಯ ಭಾಗ ೧ .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಕರ್ಣಾಟಕ ಗ್ರಂಥಮಾಲೆ ತೋಫಲ್'ರ್ಖಾ-“ ಅಯ್ಯೋ ! ಇದೇನು ಹೀಗೆ ಮಾಡಿದಿರಿ ? ಈ ನನ್ನ ಸುಂದರಭವನವನ್ನು ಆಕೆಯಿಂದ ಅಲಂಕರಿಸದೆ, ಯಾವುದೇ ಧಕ್ಕೆ ಸತ್ರದಲ್ಲಿ ಇಳಿಸಿಬಿಟ್ಟರಲ್ಲಾ! ಈ ಮಾತನ್ನು ಕೇಳಿದಾಗಿನಿಂದಲೂ ನನ್ನ ಮನಸ್ಸು ಬಹಳವಾಗಿ ವಿಹ್ವಲವಾಗಿದೆ. ಕೂಡಲೆ ಸೇವಕರನ್ನು ಕಳುಹಿಸಿ ಇಲ್ಲಿಗೆ ಕರೆಯಿಸುವೆನು.' ರಾಮಯ- ರ್ಖಾಸಾಹೇಬರೇ ! ೩ರೆಪಟ್ಟು ಸೇವಕರನ್ನು ಕಳು ಹಿಸಬೇಡಿರಿ, ಅದರಿಂದ ಕೆಲಸ ಕೆಟ್ಟತು, ಅವರಿಗೆ ಮೆತ್ತಗೆ ಪುಸಲಾ ಯಿಸಿ ಸಂಶಯಕ್ಕೆ ಎಡೆಗುಡದೆ ಇಲ್ಲಿಯವರೆಗೂ ಕರೆತಂದುದಾಗಿದೆ. ಈಗ ಎಚ್ಚರಿಕೆಯಿಂದ ನಡೆದುಕೊಳ್ಳದಿದ್ದರೆ ಸ್ತ್ರೀಜನಸಹಜವಾದ ಸಂಶಯವನ್ನು ಹೆಚ್ಚಿಸಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿಕೊಳ್ಳಬಹುದು. ಆ ಯುವತಿಯು ಚಕ್ರವರಿಯ ಸಹವಾಸದಲ್ಲಿದ್ದುಕೊಂಡು ಆತನಲ್ಲಿ ಸರಿ ಪೂರ್ಣಾನುರಾಗ ಹೊಂದಿದ್ದವಳು. ಅಂತಹವಳನ್ನು ಸ್ವಾಧೀನಪಡಿಸಿ ಕಳುವುದು, ಸು ರಾಗ ಹುಟ್ಟುವಂತೆ ಮಾಡಿಕೊಳ್ಳಬೇಕು. ದುಡಕಿದರೆ ಆಕೆಯು ಆತ್ಮಹತ್ಯ ವನ್ನಾದರೂ ಮಾಡಿಕೊಳ್ಳಬಹುದು ಆದುದರಿಂದ ಬಲು ಎಚ್ಚರಿಕೆಯಿಂದ ಈಕಾಕ್ಯವನ್ನು ಸಾಧಿಸಿಕೊಳ್ಳುವುದು ತಮಗೆ ಸೇರಿದೆ ಎಂದನು. ಅನೇಕಕಾಲ ಕಷ್ಟಪಟ್ಟು ನಿನು ಲಿ ಅನು 6 m ತೋಫರ್ಖಾ-ಮಂತ್ರಿವಯ್ಯರೇ : ನಾನು ಬಹಳ ದಿವಸ ತಡೆ ದುಕೊಂಡಿರಲಾರೆ. ಅನಂಗಸೇನೆಯನ್ನು ನಾನು ಕಾಳಿದವನಲ್ಲ. ಕೊಂಡ ಪಲ್ಲಿಯಲ್ಲಿರುವ ಆಕೆಯ ತಂದೆಯು ನನಗೆ ಪರಿಚಿತನೆಂಬುದು ತನಗೆ ತಿಳಿದೇ ಇದೆ. ನನ್ನ ಪರಿಚಿತನ ಮಗಳನ್ನು ನನ್ನ ದುರ್ಗಕ್ಕೆ ಕರೆತಂದು ಬಿಟ್ಟಿರುವಾಗ, ಆಕೆಯನ್ನು ನೋಡದೆ ನಾನು ಹೇಗೆ ಸುಮ್ಮನಿರಲು ಆಗು ಟ. ವುದು ? ೨)