ಪುಟ:ರಾಯಚೂರು ವಿಜಯ ಭಾಗ ೧ .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಕರ್ಣಾಟಕ ಗ್ರಂಥಮಾಲೆ ತಿರುವ ಪ್ರಯತ್ನದಿಂದಲೂ, ದೇವರ ಅನುಗ್ರಹದಿಂದಲೂ ಅನೇಕ ಹಿಂದು ಗಳು ನಮ್ಮ ಮತಕ್ಕೆ ಸೇರಿರುವರು. ” ಖಾನ-೧೯ ಓ ಮಹಸೀAರೆ ! ಮಹಮ್ಮದೀಯ ಮತದಂತಹ ಪರಿ ಶುದ್ದವಾದ ಮತವು ಮತ್ತೆ ಯಾವುದಿರುವುದು ? ಈ ಮತದಮೇಲೆ ನನಗೆ ಬಹಳ ಪ್ರೇಮ. ಆ ಮತಬೋಧಕರು ನನಗೆ ಪಣಾಧಿಕಪ್ರಿಯರು. ಅಯ್ಯೋ ! ಹಿಂದುಗಳು ಬುದ್ಧಿಹೀನರಾಗಿ ಕಲ್ಲುಬೊಂಬೆಗಳನ್ನು ದೇವ ರಂದು ಭ್ರಮಿಸಿ ಪೂಜಿಸುವರು. ಅವರ ದೇವಸ್ಥಾನಗಳನ್ನು ಕಂಡರೆ ನನಗೆ ಎಷ್ಟೋವ್ಯಥೆಯಾಗುವುದು. ಅಫ್ರಿಗಳೆಲ್ಲವೂ ಮಸೀದಿಗಳಾಗುವುದು ಯಾವಾಗಲೋ ! ಹಾಗೆಮಾಡಿಬಿಡಬೇಕೆಂದು ನನಗೆ ಮನಸ್ಸನೋಇದೆ. ಆದರೆ ಅಂತಹಶಕ್ತಿಯು ಇಲ್ಲವಲ್ಲಾ ! ಏನುಮಾಡಲಿ ! " ಫಕೀರ- ಮಾನವರ : ಚೆನ್ನಾಗಿ ಅಪ್ಪಣೆಕೊಟ್ಟಿರಿ, ಈ ವಿಚಾ ರದಲ್ಲಿ ನಮ್ಮ ಇಬ್ಬರ ಅಭಿಪ ಯವೂ ಒಂದೇ, ಹಿಂದೂ ದೇವಾಲಯ ಗಳನ್ನು ಕೆಡವಿಸಿ ಮಸೀದಿಗಳನ್ನು ಕಟ್ಟಿ ನಿರೆಂದು ಈ ಕಾಲದ ಮಹ • ದೀಯ ಪ್ರಭುಗಳಿಗೆ ಎಷ್ಟು ಬೊಧಿಸಿದರೂ, ಅವರು ಕಿವಿಗೆ ಹಾಕಿ ಕೊಳ್ಳದಿರುವರು. ಆ ಶಕ್ತಿಯು ಪೂರ್ವ ಕಾಲದವರಿಗೆ ಇತ್ತು. ಹಿಂದೆ ಮುಚ್ಚೇ ಮಹಮದನ ಎಷ್ಟೊಂದು ದೇವಾಲಯಗಳನ್ನು ನೆಲಸಮ ಮಾಡಿಬಿಟ್ಟನು? ಹಿಂದೂ ದೇಶದಲ್ಲೆಲ್ಲಾ ಬಹಳ ಪ್ರಸಿದ್ದವಾಗಿದ್ದ ಸೋಮನಾಥದೇವಾಲಯ ವನ್ನು ಹಾಳುಗೆಡವಿ ಅದರ ಬಾಗಿ ೨:ಗಳನ್ನು ಸಾಗಿಸಿಕೊಂಡು ಹೋದನು. ಹಿಂದುಗಳು ಪರಮಭಕ್ತಿಯಿಂದ ಪೂಜಿಸುತ್ತಿದ್ದ ಕಲ್ಲಿನ ಬೊಂಬೆಯನ್ನು ತುಂಡುತುಂಡುಮಾಡಿ, ಆ ಚೂರುಗಳನ್ನು ಮಕ್ಕಾಪಟ್ಟಣಕ್ಕೆ ಕಳುಹಿಸಿ ಕೊಟ್ಟನು. ಅಂತಹ ಸಾಮರ್ಥವು ಈಗಿನ ಕಾಲದವರಿಗೆ ಬಂದೀತೆ? ಮಹಮ್ಮದ್ ಫರಿಯ, ಕುತುಬುದೀನನೂ ಹಿಂದುಗಳ ಮತಕ್ಕೆ ಕೊಡಲಿಯಂತೆ ಪ್ರವರ್ತಿಸಿ ನನ್ನ ಮತಕ್ಕೆ ಎಷ್ಟೋಸಹಾಯಮಾಡಿ ಟ