ಪುಟ:ರಾಯಚೂರು ವಿಜಯ ಭಾಗ ೧ .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ಳಿ ಕರ್ಕಾಟಕ ಗ್ರಂಥಮಾಲೆ ಮಹಾ ಮಂತ್ರಿಗಳನ್ನೂ ತಮ್ಮ ಬಲೆಗೆ ಸಿಕ್ಕಿಸಿಕೊಂಡು, ಸೂತ್ರದ ಬೊಂಬೆ ಗಳಂತೆ ಕುಣಿಸಲು ಸಮರ್ಥವುಳ್ಳ ರಾಮಯಾವತ್ಯರು, ಇವರು ಉದ ಯಗಿರಿ ರಾಜರ ಚಿಕ್ಕಪ್ಪಂದಿರೂ, ವಿಕ್ರಮಶಾಲಿಗಳ ಆದ ಪಹರೇಶ್ವರ ಪಾತ್ರರು; ಉದಯಗಿರಿ ದುರ್ಗಾಧ್ಯಕ್ಷರಾದ ವೀರಭದ್ರ ಚಿತ್ರರ ಪುತ್ರರೂ ಅತ್ಯಂತ ಪ್ರತಾಪಶಾಲಿಗಳ ಆದ ಸೋಮೇಶ್ವರಪುತ್ರರೇ ಇವರು. ಇಗೋ! ಇವರು ಬೆಲ್ಲ ಮುಕೊಂಡ ದುರ್ಗಾಧಿಪತಿಗಳ ಕುಮಾರರೂ, ವೈರಿವೀರ ಕಾಲರುದ್ರರೂ ಆದ ರುದ್ರದೇವರು. ಇಗೋ ! ಇವರು ಗೋಲಕೊಂಡದ ಬಾದಷಹರ ಸೇನಾನಕಯರಾದ ವಲಮಲಖಾನರು. ಈ ಮಹಾತ್ಮರು ಅಹಮ್ಮದಗರದ ಪ್ರಧಾನಮಂತ್ರಿ i೪ಾದ ಕಂಬರಸೇನರು, ಈ ಮಹನೀ ಯುರನ್ನು ಏಕಕಾಲದಲ್ಲಿ ಇಲ್ಲಿ ಬಂದು ಸೇರುವಂತೆ ಮಾಡಿದವರು ರಾಮುಯ ಮಂತ್ರಿಗಳು, ಬಹಳ ಕಾಲದಿಂದಲೂ ಬೇರೆಬೇರೆ ಇರುತ್ತಿದ್ದ ಈ ಮರು ಮಹಮ್ಮದೀಯ ರಾಜ್ಯಗಳನ್ನೂ ಈಗ ಪರಸ್ಪರ ಪ್ರೀತಿಯಿಂದ ಒಟ್ಟುಗೂ ಡಿಸಿ, ನಮ್ಮ ರಾಜ್ಯಗಳ ಪುರೋಭಿವೃದ್ಧಿಯನ್ನು ಉಂಟುಮಾಡುವ ಸುಸಂಧಿ ಯನ್ನು ರಾವಯ ಮಂತ್ರಿಯವರು ಕಲ್ಪಿಸಿಕೊಟ್ಟಿರುವರು. ರಾಜನೀತಿ ವಿಶಾರದರಾದ ಮಹಾಸ್ವಾಮಿಯವರು ಇಂತಹ ಸುಸಂಧಿಯು ಬಿಟ್ಟು ಹೋಗಲು ಅವಕಾಶಕೊಡುವುದಿಲ್ಲವೆಂದು ನಾನು ನಂಬಿರುವೆನು.” ಎಂದು ಹೇಳಿ ತನ್ನ ಪೀಠದಲ್ಲಿ ಕುಳಿತುಕೊಂಡನು. ಆತನ ಮಾತು ಗಳನ್ನು ಕೇಳಿ ಅದಿಲ್‌ಪಹನು ಬಹಳ ಸಂತೋಷಪಟ್ಟು, ರಾಮಯಮಂತ್ರಿ) ಯಕಡೆಗೆ ತಿರುಗಿ ಹೀಗೆ ಸಂಭಾಷಿಸಿದನು:- “ ಓ ಮಂತ್ರಿಷ್ಠರೆ, ತಾವು ಮಾಡಿರುವ ಈ ಕೆಲಸಗಳಿಂದಲೇ ತಮ್ಮ ಅಸಮಾನಪ್ರತಿಭೆಯು ಸ್ಪಷ್ಟವಾಗುವುದು. ತಾವು ಇಷ್ಟು ಗಟ್ಟಿಗೆ ರೆಂದೂ ಮಹಮ್ಮದೀಯ ರಾಜ್ಯಗಳನ್ನು ಒಟ್ಟುಗೂಡಿಸುವ ಶಕ್ತಿಯು ತಮಗೆ ಇರುವುದೆಂದು ಮೊದಲು ನಾನು ನಂಬದೆ ಹೋದುದಕ್ಕಾಗಿ ಬಹಳ ಟಿ