ಪುಟ:ರಾಯಚೂರು ವಿಜಯ ಭಾಗ ೧ .djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೭೫ ಪಶ್ಚಾತ್ತಾಪಪಡುತ್ತಿದ್ದೇನೆ. ಇದನ್ನು ಮನಸ್ಸಿನಲ್ಲಿ ಇಡಬೇಡಿ. ಇಂತಹ ಪ್ರಜ್ಞಾಶಾಲಿಗಳಾದ ತವರಿಗೆ, ಶತ್ರುಕೃತವಿಸತ್ಸಮುದ್ರದಲ್ಲಿ ಮುಳುಗಿರುವ ಉದಯಗಿರಿರಾಜ್ಯವನ್ನು ಮೇಲಕ್ಕೆತ್ತುವುದು ಸಾಧ್ಯವಾಗಲಿಲ್ಲವಲ್ಲಾ ಎಂದು ವ್ಯಸನಪಡುತ್ತಿದೇನೆ.೨೨ - ರಾಮಯ-ಬಾದ್‌ಷಹರೇ, ವಿಸಾಗರದಲ್ಲಿ ಮುಳುಗಿದ್ದ ಉದಯಗಿ ರಿರಾಜ್ಯವನ್ನು ಎತ್ತಲು ನಾನು ಅನೇಕವೇಳೆ ಪ ಯತ್ನಿಸಿದರೂ ಕಾರ್ಯಾo ತರಗಳೆಂಬ ಚಂಡಮಾರುತಗಳಿ೦ದ ನನ್ನ ಪ್ರಯತ್ನ ನೌಕವು ಭಿನ್ನಭಿನ್ನವಾ ಯಿತು, ನಮ್ಮ ಸೈನ್ಯಗಳ ಧನಧಾನ್ಯ ಸಂಪತ್ತಿನ ನಾಶವಾದುವು ಅನೇಕ ರಾಜಪುತ್ರರು ಉದಯಗಿರಿ ಯುದ್ದದಲ್ಲಿ ಕಾಲವಾದರು. ಉಳಿವ ರಾಜಪುತ್ರನೂ ಆತನ ಚಿಕ್ಕತಂದೆಯ ಶತ್ರುರಾಜರಿಗೆ ಸೆರೆ ಸಿಕ್ಕಿದರು. ಇಂತಹ ಕಷ್ಟ ಸಮಯದಲ್ಲಿ ಕ್ರೌರ್ಯಕ್ಕಿಂತಲೂ ಬುದ್ಧಿಯೇ ಹೆಚ್ಚು ಪ್ರಯೋಜನಕರವೆಂದು ಭಾವಿಸಿ ಶತ್ರುವಿಗೆ ಪ್ರತಿಕ್ರಿಯೆಯನ್ನು ಮಾಡಲು ನಾನು ಹಲವು ಸಾಹಸಗಳನ್ನು ಮಾಡಿರುವೆನು, ನಮ್ಮ ರಾಜ್ಯವನ್ನು ಪುನಃ ಸ್ವಾಧೀನಮಾಡಿಕೊಂಡು ನಮ್ಮ ರಾಜಪುತ್ರನಿಗೆ ಪಟ್ಟ ಕಟ್ಟಿ ನನ್ನ ಪ್ರಭುಭಕ್ತಿಯನ್ನು ಪ್ರಕಟಗೊಳಿಸಬೇಕೆಂದು ತಮ್ಮ ಸಹಾಯವನ್ನು ಪೂರ್ಥಿನಿರುವೆನು. ತಮ್ಮ ಅನುಗ್ರಹಕ್ಕೆ ಪಾತ್ರರಾದರೆ ನಮ್ಮ ಕಷ್ಟ ಗಳು ಕಳೆದುವೆಂದೇ ನಂಬುವೆನು ಇದೇ ವಿಷಯವನ್ನು ಗೋಲುಕೊ೦ ಡದ ಕುತುಬ್‌ಪಾಹಿ ದೊರೆಗಳಿಗೆ ವಿಜ್ಞಾವಿಸಿಕೊಳ್ಳಲು, ಅವರೂ ತಮ್ಮೊ ಡನೆ ಸೇರಿ ವಿಜಯನಗರದ ಅರಸನೊಡನೆ ಯುದ್ಧ ಮಾಡಲು ಒಪ್ಪಿ, ತಮ್ಮ ಅಭಿಮತವನ್ನು ತಿಳಿಸುವುದಕ್ಕಾಗಿ ತಮ್ಮ ಮುಖ್ಯ ಸೇನಾನಿಯನ್ನು ಈ ಸಭೆಗೆ ಕಳುಹಿಸಿಕೊಟ್ಟಿರುವರು. ಅಹಮ್ಮದ್‌ನಗರದ ಬಾರಿ ಪಾಹಿ ದೊರೆಗಳ ಸಂದರ್ಶನವನ್ನು ಮಾಡಿ ಅವರೂ ಈ ಕಾರ್ಯದಲ್ಲಿ ಅನುಮತಿ ಸುವಂತೆ ಮಾಡಿರುವೆನು, ತಮ್ಮ ಸಮ್ಮತಿಯನ್ನು ತೋರಿಸುವುದಕ್ಕಾಗಿ