ಪುಟ:ರಾಯಚೂರು ವಿಜಯ ಭಾಗ ೧ .djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30+ ರ್ಕಟಿಕ ಗ್ರಂಥಮಾಲೆ wwwmwwwx ನಿಮಗೆ ಉದಯಗಿರಿಯ ರಾಮಯಮಂತ್ರಿಯ ಅಧೀನರಾಗಿರುವರು. ರಾಮಯಮಂತ್ರಿ ಸಹಿತವಾಗಿ ಉದಯಗಿರಿರಾಜ್ಯವನ್ನು ಕೊಡಿಸಿ ಸಂತೋಷ ಪಡಿಸಬೇಕು, ಇದೇ ನನ್ನ ಪ್ರಾರ್ಥನೆ.” ಎಂದು ವಿಜಯಸಿಂಹನು ಕೇಳಿಕೊಂ ರನು. ಇದನ್ನು ಕೇಳಿ ಸಭಾಸದರೆಲ್ಲರೂ ಸಂತೋಷಪಟ್ಟರು. ರಾಯರ ಅಪ್ಪಣೆ ಯನ್ನು ಪಡೆದು ತಿಮ್ಮರಸನು ಎದ್ದುನಿಂತು “ನಿನ್ನ ಪ್ರಾರ್ಥನೆಯನ್ನು ಮಹಾ ಸ್ವಾಮಿಯವರು ನಡೆಯಿಸಿಕೊಟ್ಟಿರುವರು. ' ರಾಮರಾಜನನ್ನು ಕುರಿತು «foಾಮರಾಜ ! ನಿನಗೆ ಚಕ್ರವರ್ತಿಯವರ ಪುತ್ರಿಯಾದ ತಿರುಮಲಾಂಬೆ ಯನ್ನು ಕೊಟ್ಟಿರುವರು ?” “ ತಿರುಮಲರಾಯ ! ನಿನಗೆ ರಾಜಪುತ್ರಿಯಾದ ವೆಂಗಳಾಂಬೆಯನ್ನು ಕೊಟ್ಟು ಮದುವೆ ಮಾಡುವರು ೧೨ (ತಂಕರ ರೆಡ್ಡಿ ! ನಿನಗೆ ಸೇನಾಧಿಪತ್ಯವನ್ನು ಕೊಟ್ಟಿರುವರು. " ಎಂದು ಹೇಳಿ ಅವರನ್ನು ಸಂ ತೋಷಪಡಿಸಿದನು, ಆಬಳಿಕ ತಿಮ್ಮ ಆಸನು ಸೇನಾನಾಯಕರಿಗೆ ಅವರವರಿಗೆ ತಕ್ಕ ಬಹುಮಾನಗಳನ್ನು ಮಾಡಿದನು. ರುದ್ರದೇವನಿಗೆ ಸೈನ್ಯದಲ್ಲಿ ಒಂದು ಅಧಿಕಾರವನ್ನು ಕೊಟ್ಟನು. ಹೀಗೆ ಹಲವರಿಗೆ ಬಹುಮಾನಗಳು ದೊರೆಯಲು ಸಭೆಯವರೆಲ್ಲರೂ ಸಂತೋಷಪಟ್ಟರು. ಕೆಲ ದಿನಗಳಲ್ಲಿಯೇ ಬಂದು ಶುಭಮುಹೂರ್ತದಲ್ಲಿ ಮಹಾವೈಭವದಿಂದ ಆ ಮ" ಮದುವೆಗಳೂ ನಡೆ ದುವು, ರಾಮರಾಜತಿರುವುರಾಜ ಕೃಷ್ಣರಾಯರಿಗೆ ಭಜಗಳ೦ತಿದ್ದು ಕೃಷ್ಣದೇವರಾಯರಿಗೆ ಸಹಾ ತ.ನಾಡು ಾ ಚರಿತೆ ಯಲ್ಲಿ ಬಹು ಪ್ರಸಿದ್ಧ ರಾದರು. ವಿಜಯಸಿಂಹನು ಮು೦ಕ್ಯಾಬೆ ರಾಮಯಮಂತ್ರಿ ಚಿಹರೇಪ್ಪರ ರೊಡನೆ ಉದಯಗಿರಿಗೆ ಹೋಗಿ ಆರಾಜ್ಯವನ್ನು ಪ್ರಜಾತಂಕವಾಗಿ ಬಹುಕಾಲ ಪಾಲಿಸುತ್ತಾ ಸುಖವಾಗಿದ್ದನು. 9 m • ಭದ್ರಂ, ತುಭು, ಮಂಗಳಂ, #- “