ಪುಟ:ರಾಯಚೂರು ವಿಜಯ ಭಾಗ ೧ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಚ್ రీచిరు ఏజయ Kw ಕಟ್ಟಿ ಉರುಳಿಸಿರುವರು, ಆಳುಗಳೆಲ್ಲರೂ ಮಾಯವಾಗಿರುವರು. ಹೀಗಿರು ವಾಗ ಅರಕ್ಷಿತಳಾಗಿದ್ದ ನನ್ನನ್ನು ಯಾರೋ ದುರಾತ್ಮರು .ಕಟ್ಟಿಹಾಕಿ, ಬಾಯಿಗೆ ಬಟ್ಟೆಯನ್ನು ತುರುಕಿ ಹೊತ್ತು ತಂದು ಇಲ್ಲಿ ಇಳಿಸಿದರು. ಭಾಯಿ ಯ ಬಟ್ಟೆಯನ್ನು ತೆಗೆದಕೂಡಲೆ ನಿರಾಶಳಾಗಿ ಅರಚಿಕೊಂಡನು. ನನ್ನ ಅದೃಷ್ಟವು ಗಟ್ಟಿಯಾಗಿದ್ದಿತೆಂದು ತೋರುವುದು, ಇಲ್ಲದಿದ್ದರೆ ನನ್ನ ಈ ಕಷ್ಟದಲ್ಲಿ ನೀವು ಬಂದು ಬಿಡಿಸಿಕೊಳ್ಳುತ್ತಿರಲಿಲ್ಲ. ವಿಜಯಸಿಂಹನನ್ನು ವಧಿಸಿಬಿಟ್ಟ ರಷ್ಟೆ ! ಮುಂಚೆ ಈ ಶುಭವರ್ತಮಾನವನ್ನು ತಿಳಿಸಿ." ರಾಮಯ-“ ತಾಯಿ ! ಅವನನ್ನು ಕೊಲ್ಲಬೇಕೆಂದಿರುವಷ್ಟರಲ್ಲಿ ನಿನ್ನ ಆರ್ತಧ್ವನಿಯನ್ನು ಕೇಳಿ ಓಡಿಬಂದೆವು. ಆ ಧ್ವನಿಯನ್ನು ನೆನೆದುಕೊಂಡರೆ ಈಗಲೂ ಭಯವಾಗುವುದು. ಬಾ. ಈಗಲೇಹೋಗಿ ಆ ದುರಾತ್ಮನಾದ ವಿಜಯಸಿಂಹನನ್ನು ಕೊಲ್ಲಿಸೋಣ ” ಎಂದುಹೇಳಿ ಆಕೆಯನ್ನೂ ಜೊತೆ ಯಲ್ಲಿ ಕರೆದುಕೊಂಡು ಅವರು ಹೊರಟರು. ಅವರು ವಿಜಯಸಿಂಹನನ್ನು ಕಟ್ಟಿ ಉರುಳಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ, ಅವನಿಗೆ ಕಟ್ಟಿದ್ದ ಹಗ್ಗಗಳು ತುಂಡುತುಂಡಾಗಿ ಇದ್ದುವೇ ಹೊರತು ವಿಜಯಸಿಂಹನು ಇರಲಿಲ್ಲ; ಅವನ ಮೇಲೆ ಕಾವಲಿದ್ದ ಇಬ್ಬರು ಆಳುಗಳೂ ಇರಲಿಲ್ಲ, ಸ್ವಲ್ಪ ದೂರದಲ್ಲಿ ಇಬ್ಬರು ಪುನುಷ್ಯರ ಶವಗಳು ಬಿದ್ದಿದ್ದುವು. ದೀಪದ ಬೆಳಕನ್ನು ಹಿಡಿದು ನೋಡಲಾಗಿ ಅವು ಕಾವಲುಗ ರದ ಹೆಂಗಳೆಂದು ಗೊತ್ತಾದುದಲ್ಲದೆ ವಿಜಯಸಿಂಹನನ್ನು ಅವನ ಹಿತಚಿಂತ ಕರು ಬಿಡಿಸಿಕೊಂಡು ಹೋದರೆಂದೂ ಸ್ಪಷ್ಟವಾಯಿತು. ಇನ್ನು ವ್ಯಸನಪಟ್ಟು ಫಲವಿಲ್ಲವೆಂದು ತಿಳಿದು, ರಾಮ ಯನು ತನ್ನ ಸಂಗಡಿಗರನ್ನು ಸಮಾಧಾನ ಪಡಿಸಿ ಅವರೊಡನೆ ಪ್ರಹರೇಶರನ ಮನೆಗೆ ಬಂದನು, ರಾಮಯಸನ್ನು ಕಂಡ ಕೂಡಲೆ ಪ್ರಹರೇಶ್ವರನು ಆನಂದದಿಂದ- “ ವಿಜಯಸಿಂಹಸು ಸತ್ಯಸಪ್ಪೆ?” ಎಂದು ಕೇಳಿದನು. ರಾಮಯನು ಹರೇಶ್ವರನ ಬಂಧನಗಳನ್ನು ಬಿಡಿಸಿ ನಡೆದ ಘಟನಾವಳಿಯೆಲ್ಲವನ್ನೂ ತಿಳಿಸಳುಗಿ ಪ್ರಹರೇಕ್ಷರನಿಗೆ ಅತ್ಯಂತ ರಸಸವಾಯಿತು, ಬಹರೇಕ ರನ, ರುದ್ರದೇವನೂ, ಮುಕ್ಕಾಂಬೆಗೆ ಆಶಯವನ್ನು ತಂದವರು ವಿಜಯಸಿಂಹನ ಕಡೆಯವರೆಂದೇ ನಿರ್ಧರಿಸಿದರು - 6 ದಿ