ಪುಟ:ವಿದ್ಯಾರ್ಥಿ ಕರಭೂಷಣ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರತಕ್ಕವರು ಮುಂದೆ ಸತ್ತ್ವ ಜೆಗಳೆನ್ನಿಸಿಕೊಳ್ಳಬೇಕಾದರೆ, ಅದಕ್ಕೆ ತಕ್ಕಂತೆ ಅವರು ಈಗಿನಿಂದಲೂ ಚೆನ್ನಾಗಿ ಶಿಕ್ಷಿತರಾಗಬೇಕು. ನಮ್ಮ ಪ್ರಾಚೀನರು, ಈ ವಿಧವಾದ ಶಿಕ್ಷೆಯನ್ನು ಹಲವು ಬಗೆಯಲ್ಲಿ ಕೊಡುತಿದ್ದರು, ಈಗ ಪ್ರಸಂಚಸ್ಪಿತಿ ಬದಲಾಯಿಸುತಬಂದಿರುವಕಾರಣ, ಈ ಶಿಕ್ಷೆಯಲ್ಲೂ ಸ್ವಲ್ಪ ವ್ಯತ್ಯಾಸವಾವಶ್ಯಕವಾಗಿರುವುದು, ಇದನ್ನೆಲ್ಲ ಪರಾಲೋಚಿಸಿ, ತಮ್ಮ ಆಯಸ್ಸಿನಲ್ಲಿ ಬಹಳ ಭಾಗವನ್ನು ವಿದ್ಯಾಭ್ಯಾಸ ಶಾ.ಯಲ್ಲಿಯೇ ಕಳೆದು ಈಗ ಆ ಯಿಲಾಖೆಯ ಇನ್‌ಸ್ಪೆಕ್ಟರ್ ಜನರಲ್ ರವರಾಗಿರುವ ಶ್ರೀರ್ಮಾ, ಎಮ. ರಾಮರಾವ್ ಎವ°, ಎ., ಅವರು, (ರ್Fಾ !ಾಡ್ ಎಂಬ ಆಂಗ್ಲೀಯರಿಂದ ರಚಿತವಾಗಿರುವ . ಸ್ಕೂಡೆಂಟ್ಸ್ ಮ್ಯಾನ್ಯುಯಲ್‌' ಎಂಬ ಗ್ರಂಧವನ್ನು ಕನ್ನಡಿಗರಿಗನುಕೂಲಿಸುವಂತೆ ಬರೆಯಬೇಕೆಂದು ಅಪ್ಪಣೆ ಕೊಟ್ಟರು. ಆ ಮೂಲಗ್ರಂಧದಲ್ಲಿ, ಆಂಗ್ಲ ದೇತೀಯ ವಿದ್ಯಾರ್ಥಿಗಳಿಗೆ ಅನುಕೂಲವಾದ ಅನೇಕ ಸದ್ವಿಷಯಗಳು ಬಹು ಯುಕ್ತಿಯುಕ್ತವಾಗಿ ವಿವರಿಸಲ್ಪಟ್ಟಿರುವುವು, ಅದರಲ್ಲಿರುವ ಉದಾಹರಣೆಗಳೂ, ಆ ದೇಶಕ್ಕೆ ತಕ್ಕಂತಿರುವುವು. ಆ ಗ್ರಂಧವನ್ನು ಆಧಾರವಾಗಿಟ್ಟುಕೊಂಡು, ನಮ್ಮದೇಶದ ವಿದ್ಯಾರ್ಥಿಗಳಿಗೆ ಅನುಕೂಲಿಸು ವಂತೆ, ನಮ್ಮಲ್ಲಿ ಸುಪ್ರಸಿದ್ದವಾದ ಉದಾಹರಣೆಗಳನ್ನೂ ಪ್ರಕೃತೋಚಿತ ವಾಗಿ ಆಂಗ್ಲಯರ ಕೆಲವು ಉದಾಹರಣೆಗಳನ್ನೂ ಕೊಟ್ಟು, ಈ ಗ್ರಂಥವು ರಚಿಸಲ್ಪಟ್ಟಿರುವುದು. - ಮೂಲಗ್ರಂಧವು ಬಲು ದೊಡ್ಡದಾಗಿರುವುದರಿಂದ, ಒಂದೇ ತಡವೆಗೆ ಎಲ್ಲವನ್ನೂ ಸೇರಿಸಿ ಬರೆದರೆ ಗ್ರಂಧವಿಸ್ತರವಾಗುವುದೆಂಬ ಶಂಕೆಯಿಂದ