ಪುಟ:ವಿದ್ಯಾರ್ಥಿ ಕರಭೂಷಣ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೫೭ .. ಮೊದಲಾದ ವ್ಯಾಖ್ಯಾನಗಳನ್ನು ಬರೆದರು. ಇವರಿಗೆ ದಿಗಂತವಿಶ್ರಾಂತ ವಾದ ಕೀರ್ತಿ ಬಂದಿತು. ಇಂಧ ಕೀರ್ತಿ ಬರುವಾಗೈ, ಇವರಿಗೆ ಸುಮರು ಎಂಬತ್ತು ವರುಷ ವಯಸ್ಸಾಗಿದ್ದಿತು. ಇವರ ಹೆಂಡತಿಗೆ ಎಪ್ಪತ್ತ ರಮೇಲೆ ವಯಸ್ಸಾಗಿದ್ದಿತು. ಈ ದಂಪತಿಗಳಿಗೆ ಬಾಲ್ಯದಲ್ಲಿಯೇ ವಿಯೋ ಗವ್ರಂಟಾಗಿ, ಆಕೆಗೆ ಇವರ ವರ್ತಮಾನವೇ ತಿಳಿದಿರಲಿಲ್ಲ ; ದೇಶಾಂತ ರಕ್ಕೆ ಹೋಗಿ ಎಲ್ಲಿಯೋ ದೇಹವನ್ನು ಬಿಟ್ಟಿರಬಹುದೆಂಬ ಸಂದೇಹವೂ ಉಂಟಾಗಿದ್ದಿತು. ಅಕಸ್ಮಾತ್ತಾಗಿ, ದೀಕ್ಷಿತರು ಬದುಕಿರುವರೆಂಬುದಾ ಗಿಯ ಅನನ್ಯಸಾಧಾರಣವಾದ ಕೀರ್ತಿಯು ಇವರಿಗೆ ಲಭ್ಯವಾಗಿರುವು ದೆಂಬುದಾಗಿಯೂ ತಿಳಿದು, ಈಕೆಯು ಉತ್ತರದೇಶಕ್ಕೆ ಪ್ರಯಾಣಮಾಡಿ ಗಂಡನ ಮನೆಗೆ ತಲುಪಿ, ತನ್ನ ವೃತ್ತಾಂತವನ್ನೆಲ್ಲಾ ತಿಳಿಯಿಸಿದಳು ದೀಕ್ಷಿ ತರು ಆಕೆ ಯನ್ನು ಪರಿಗ್ರಹಿಸಿ, ಮನೆಗೆ ಯಜಮಾನಿಯನ್ನಾಗಿ ಮಾಡಿ, ಶಿಷ್ಯರ ಯೋಗಕ್ಷೇಮ ಚಿಂತೆಯನ್ನು ಆಕೆಗೊಪ್ಪಿಸಿದರು. ಒಂದಾನೊಂದುದಿನ ಆಕೆಯು ದೀಕ್ಷಿತರನ್ನು ಕುರಿತು ನೀವು ಬಾಲ್ಯದಲ್ಲಿಯೇ ನನ್ನನ್ನು ಅನಾಧಳನ್ನಾಗಿ ಬಿಟ್ಟು ಇಲ್ಲಿಗೆ ಬಂದು ನಿಮ್ಮ ಯವನವೂ ನನ್ನ ಮೌನ ನವೂ ವ್ಯರ್ಧವಾಗುವಂತೆ ಮಾಡಿ ಮಕ್ಕಳಿಲ್ಲದಂತೆ ಮಾಡಿದ್ದ ಕ್ಕೋಸ್ಕರ ತುಂಬ ವ್ಯನನಪಡಬೇಕಾಗಿದೆ ಎಂದು ಹೇಳಿದಳು. ಅದನ್ನು ಕೇಳಿ ದೀಕ್ಷಿ ತರು « ಇಷ್ಟು ವಯಸ್ಸಾಗಿಯೂ ನಿನಗೆ ಸಾರಾಸಾರಜ್ಞಾನವಿಲ್ಲದೆ ಹೋದುದಕ್ಕೋಸ್ಕರ ನಾನು ತುಂಬ ವಿಷಾದಿಸುತ್ತೇನೆ. ನಮಗೆ ಸಂತಾನ ವಿಲ್ಲ ವೆಂದು ಭಾವಿಸಬೇಡ; ನಾನು ಐವತ್ತು ಅರವತ್ತು ವರುಷಗಳು ಕಷ್ಟ ಪಟ್ಟು ಆಚಂದ್ರಾರ್ಕಸ್ಥಾಯಿಗಳಾದ ಮಕ್ಕಳನ್ನು ಪಡೆದಿರುತ್ತೇನೆ, ಶಬ್ಲೆಂ