ಪುಟ:ಶಕ್ತಿಮಾಯಿ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೧೧೫ ಲೇ ತಿಳಿಸಲ್ಪಟ್ಟಿದೆ; ಮತ್ತು ಅದಕ್ಕೆ ಜಹಾಂಪನರವರು ಒಪ್ಪಿಯ ಇರುತ್ತಾರೆ. ಕೇವಲ ಸಂಧಿಪತ್ರಗಳಿಗೆ ಪರಸ್ಪರರ ಸ್ವಾಕ್ಷರಗಳಿಂದ ರುಜು ಮಾಡುವದಕ್ಕಾಗಿ ಈಗ ಇಲ್ಲಿಗೆ ಬಂದದ್ದಾಗಿದೆ. ಆದರೆ ತಾವು ಪುನಃ ಅದನ್ನೇ ಕೇಳುತ್ತಿರುವದರಿಂದ, ನಾನು ತಮ್ಮ ಆಜ್ಞೆ ಯ ಪ್ರಕಾರ ತಮಗೆ ಮತ್ತೆ ತಿಳಿಸುವದೇನಂದರೆ, ಮೊಟ್ಟ ಮೊದಲು ನಾನು ಸನ್ಯಾಸಿನಿಯ ಮುಕ್ತಿಯನ್ನು ಅಪೇಕ್ಷಿಸುತ್ತೇನೆ. ಇದೇ ನನ್ನ ಮೊದಲನೇ ಕೋರಿಕೆಯು; ಹಾಗು ಈಗೊಂದು ವರ್ಷದಿಂದ ನಿಷ್ಕಾರಣವಾಗಿ ನನಗುಂಟಾದ ಹಾನಿಯನ್ನು ತುಂಬಿಕೊಡುವದ ಕಾಗಿ, ಬಾದಶಹನು ಇನ್ನು ಮುಂದೆ ನನ್ನ ದಿನಾಜಪರ ರಾಜ್ಯದಿಂದ ಕಪ್ಪವನ್ನು ತಕ್ಕೊಳ್ಳಬಾರದೆಂಬದೇ ನನ್ನ ಎರಡನೇ ಇಚ್ಛೆಯು,” - ಇದನ್ನು ಕೇಳಿ, ಬಾದಶಹನು ಹುಬ್ಬು ಗಂಟಿಕ್ಕಿ-ಆದರೆ ನಿನ್ನ ವಿದ್ರೋಹತೆಯಿಂದ ನಮಗುಂಟಾದ ಹಾನಿಯು ತುಂಬಿ ಬರುವ ಬಗೆ ಯಾವದು? ಗಣೇಶ. ಇನ್ನು ಮುಂದೆ ನಾನು ತಮ್ಮ ವನಾಗಿ ನಬಾಬ ನೊಡನೆ ಯುದ್ಧ ಮಾಡುವದರಿಂದ ಬಾದಶಹ ಯಾವನೊಬ್ಬ ಸಾಮಾನ್ಯ ಪ್ರಜೆಯ ಇಚ್ಛೆ-ಅನಿ ಜೈಗಳನ್ನು ನಾವೆಂದಾದರೂ ಅನುಸರಿಸುವೆವೇನು? ನೀನು * ಈಗ ನಮಗೆ ಸಹಾಯಮಾಡದಿದ್ದರೆ, ನಿನ್ನ ಮಗ್ಗಲು ಮುರಿಯುವ ಹಾಗೆ ನಿನ್ನನ್ನು ದಂಡಿಸುವೆವು. ಇಷ್ಟು ದಿವಸಗಳ ವರೆಗೆ ರಾಜದ್ರೋ ಹಿಯಾಗಿ ಎಂಥ ಅನ್ಯಾಯವನ್ನು ಮಾಡಿರುವೆಯೋ ಅದಕ್ಕಾಗಿ ನಿನ ಗಾವ ಶಿಕ್ಷೆಯನ್ನು ಕೊಡಬೇಕು? ಬೊಗಳು, ಗಣೇಶ-ನಾನು ತಮ್ಮ ಸಭಾಗೃಹವನ್ನು ಸೇರುವ ಪೂರ್ವದ ಲ್ಲಿಯೇ ತಾವು ಮಾಡತಕ್ಕ ಶಿಕ್ಷೆಯನ್ನು ಮಾಡಬಹುದಾಗಿತ್ತು. ವಿ ಶ್ವಾಸಕೊಟ್ಟು ನನ್ನನ್ನು ಇಲ್ಲಿಗೆ ಕರೆಯಿಸಿ, ಈಗ ನನ್ನೊಡನೆ ,ಆ ಶಿಕ್ಷೆ