ಪುಟ:ಶತಕ ಸಂಪುಟ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಶತಕ ಸಂಪುಟ

ಭೂರಿಕೋಪದಿ ಹಳಿಯೆ ಭಾಸ್ಕರಗೆ ಕುಂದೇನು
ಮಾರಾರಿ ನಿನ್ನ ನಿಂದಿಸುವವರು ನರಕದೊಳು
ಸೇರುವರು ಸತ್ಯವಿದು ನಿಜಲಿಂಗ ಭವಭಂಗ ಶರಣಜನವರದ ಜಯತು ‖೩೮

ಬಲುಲೋಭಿಗಳ ಬಳಿಯೆ ಧನವಿದ್ದು ಫಲವೇನು
ಕಲಿಯಿಲ್ಲದವಗೆ ಚಂದ್ರಾಯುಧವು ಇದ್ದೇನು
ನೆಲೆಯರಿತುವೋದಲರಿಯದವನ ಬಳಿಯೆ ಕಾವ್ಯಸಾರಂಗಳಿದ್ದರೇನು
ಹೊಲಬರಿಯದನ ಬಳಿಯೆ ಸಂಜೀವವಿದ್ದೇನು
ಮಲಹರನೆ ನಿನ್ನ ಭಜಿಸದ ಮನುಜ ನರಜನ್ಮ
ದಲಿ ಬಂದು ಫಲವೇನು ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೩೯ ‖


ಸಂಗರಕೆ ಭೀತಿಗೊಂಬುವ ಬಂಟನಿದ್ದೇನು
ಮುಂಗಂಡು ಮಾತನಾಡದ ಸಚಿವನಿದ್ದೇನು
ಇಂಗಿತವನರಿತು ನಡೆಯದ ಗೆಳೆಯನಿದ್ದೇನು ವಿಮಲಶಾಸ್ತ್ರಾಗಮವನು
ಅಂಗಯಿಸಿ ಓದಿಕೊಳ್ಳದ ಪಾರ್ವನಿದ್ದೇನು
ಅಂಗಭವಹರ ನಿಮ್ಮ ಸ್ತುತಿಮಾಡದಿಪ್ಪ ಪಾ
ಪಾಂಗನವನಿದ್ದೇನು ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೪೦


ಕೊಟ್ಟಬಳಿಕಿನ್ನು ಮನದೊಳಗೆ ಕುದಿವನು ಮೂರ್ಖ
ಕೆಟ್ಟು ಪಿಸುಣಿಗ ನೆಂಟರನು ಸೇರುವನು ಮೂರ್ಖ
ನಿಷ್ಠವಂತರ ಹಳಿದು ನಿಂದಿಸುವನತಿಮೂರ್ಖ ದಯದೊಳಾಳುವವೊಡೆಯನ
ಬಿಟ್ಟಾಡಿ ದೂರಿಕೊಂಬುವನೀಗ ಕಡುಮೂರ್ಖ
ಸೃಷ್ಟಿಗೀಶ್ವರ ನಿಮ್ಮ ಸ್ತುತಿಗಳನು ಜಗದೊಳಗೆ
ಬಿಟ್ಟವನು ಬಲು ಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೪೧ ‖