ಪುಟ:ಶತಕ ಸಂಪುಟ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೭೧


ಜಗದೊಡೆಯ ನಿನ್ನ ನಾಮವ ನುತಿಪ ಪುಣ್ಯಾತ್ಮ
ರಿಗೆ ದೋಷವಿರಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೪


ಸಂಗೀತಸವಿಯು ಬಧಿರಂಗೆ ತೋರುವುದುಂಟೆ
ಕಂಗುರುಡನಿಗೆ ಕನ್ನಡಿಯ ಹಂಬಲಿರಲುಂಟೆ
ರಂಗುದುಟಿ ಮಾಣಿಕ್ಯ ಥಳಥಳಿಸುತಿರಲು ಗೋಲಾಂಗುಲಗೆ ಪರಿಖೆಯುಂಟೆ
ಕಂಗೊಳಿಸುವಿನಿಗೋಲ ರುಚಿಯು ಬೋಡನಿಗುಂಟೆ
ಮಂಗಳಾತ್ಮಕ ನಿನ್ನ ದಿವ್ಯನಾಮವನರಿಯ
ದಂಗೆ ಭವ ಬಿಡಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೫ ‖

ಮರಣಕಾಲಕೆ ಪಿರಿದು ಅರಸುತನ ಬರಲೇನು
ಪರಮರೋಗದೊಳು ಘೃತಪರಮಾನ್ನ ಬರಲೇನು
ಹರಿಣಾಕ್ಷಿ ವೃದ್ಧನಾಗಿರುವಾಗ ಬರಲೇನು ಧರಣಿಯೊಳು ಬೆಳೆದ ಫಲವು
ಉರಿದು ಹಾರಿದ ಬಳಿಕ ಭರದಿ ಮಳೆ ಬರಲೇನು
ಹರಣ ಹಿಂಗದ ಮುನ್ನ ನಿನ್ನ ಸ್ಮರಿಸದ ಮನುಜ
ನಿರಲೇನು ಧರೆಯೊಳಗೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೬ ‖

ಪತಿಯ ನಿಂದಿಸುತಿಪ್ಪ ಸತಿಯಿದ್ದು ಫಲವೇನು
ಅತಿಮಂದಮತಿಯಾದ ಸುತನಿದ್ದು ಫಲವೇನು
ಮತಿಯಿಲ್ಲದವನ ಸಂಗತಿಯಿದ್ದು ಫಲವೇನು ಹಿತವಿಲ್ಲದರ ಬಳಿಯಲಿ
ಸತತ ಮನಮುಟ್ಟಿ ಧಾವತಿಯ ಮಾಡಿದಡೇನು
ಚತುರಾಸ್ಯನಮಿತ ನಿನ್ನಯ ಪುಣ್ಯನಾಮವನು
ನುತಿಸದವನಿದ್ದೇನು ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೩೭ ‖

ಚೋರ ನಿಂದಿಸಲಾಗಿ ಚಂದಿರಗೆಕುಂದೇನು
ಪೋರ ನಿಂದಿಸಲಾಗಿ ಪ್ರಾಜ್ಞರಿಗೆ ಕುಂದೇನು
ದಾರಿದ್ರ ನಿಂದಿಸಲು ದಾನಶೂರಗೆ ಬಂದ ಕುಂದೇನು ಹುಟ್ಟಂಧಕ