ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೮೫

ಹತ್ತಿರಕ್ಕೆ, ಕರ್ತಾಭಜಾ, ರಾಮಾಯಿತ, ವೈಷ್ಣವ, ತಾಂತ್ರಿಕ ಮುಂತಾದ ಸಕಲ ಸಂಪ್ರದಾಯಗಳ ಸಾಧುಗಳೂ, ಸಾಧಕರೂ, ವೈಷ್ಣವಚರಣ ಗೌರೀಪಂಡಿತ ಮುಂತಾದ ಶಾಸ್ತ್ರಜ್ಞರೂ, ಪಂಡಿತರೂ ಬಂದು ಅವರ ಸಹಾಯದಿಂದ ಧರ್ಮ ಲಾಭವನ್ನು ಹೊಂದಿ ಹೊರಟು ಹೋಗಿದ್ದರು. ಇದನ್ನು ಕಲ್ಕತ್ತೆಯ ನಿವಾಸಿಗಳೇ ಅನೇಕರು ಅರಿಯರು.

ಗುರುಭಾವವು ಪೂರ್ಣವಾಗಿ ವಿಕಾಸವಾದ ಮೇಲೆ ಅದೆ? ಸಹಜವಾದ ಭಾವವಾಗಿ ನಿಂತುಕೊಂಡಿತು. ಆಗ ಪರಮಹಂಸರು ಜಗನ್ಮಾತೆಯಿಂದ ನಿರ್ದಿಷ್ಟರಾದ ಭಕ್ತರ ಆಗಮನವನ್ನೇ ನಿರೀಕ್ಷಿಸಿಕೊಂಡು ಕುಳಿತಿದ್ದರು. ಜಾಗ್ರತೆಯಲ್ಲಿಯೇ ಇವರೂ ಇತರರೂ ಬರಲು ಮೊದಲು ಮಾಡಿದರು. ಅಲ್ಲಿಂದ ದೇಹತ್ಯಾಗ ಮಾಡುವವರೆಗೂ ಮಿಕ್ಕಿದ್ದ ಐದಾರು ವರ್ಷಗಳೂ ಶಿಕ್ಷಣ, ಉಪದೇಶ ಇವುಗಳಲ್ಲಿಯೇ ವಿಶೇಷವಾಗಿ ಕಳೆದು ಹೋದುವು.

ನಿಜವಾದ ಗುರುಗಳ ಚರಿತ್ರೆಗಳೆಲ್ಲಾ ಹೀಗೆಯೇ ! ಅ೦ಥವರು ಗುರುಭಾವವನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟುವರು. ಕುಂಬಳಕಾಯಿ ಪಡವಲಕಾಯಿ ಮುಂತಾದ ಗಿಡಗಳಲ್ಲಿ ಕಾಯಿ ಬಿಡುವ ಹೂಗಳನ್ನು ಹೂ ಅರಳುವುದಕ್ಕೆ ಮುಂಚೆಯೇ ಹೇಳಿ ಬಿಡಬಹುದು. ಏಕೆಂದರೆ ಅಂಥ ಮೊಗ್ಗಿನ ಹಿಂದೆ ಒಂದು ಸಣ್ಣ ಹೀಚು ಅಂಟಿಕೊಂಡಿರುವುದು. ನಿಜವಾದ ಗುರುವಿನಲ್ಲಿಯೂ ಹೀಗೆಯೇ; ಮೊದಲು ಗುರುಭಾವ; ಆಮೇಲೆ ಮಾನುಷಭಾವ. ಅದಕ್ಕೆ ತಕ್ಕಂತೆ ಹುಟ್ಟಿದ್ದು ಮೊದಲ್ಗೊಂಡು ಆ ಗುರುಭಾವವು ಬಲಿತು ರಸತುಂಬಿ ಪ್ರಕಾಶಕ್ಕೆ ಬರಲು ಅನುಕೂಲವಾದ ಸಂದರ್ಭಗಳು ತಾವಾಗಿಯೇ ಒದಗಿ ಬರುತ್ತವೆ. ಇವೆಲ್ಲಾ ಗುರುಭಾವವನ್ನು ಸಂಪಾದಿಸಿಕೊಡುತ್ತವೆ ಎಂದರ್ಥವಲ್ಲ. ಆ ಗುರುಭಾವವಿರುವುದರಿಂದ ಅದರ ಪ್ರಕಾಶಕ್ಕೋಸ್ಕರ ಇವೆಲ್ಲಾ ಸಂಘಟಿಸುತ್ತವೆ.

ಅದಕ್ಕೆ ಉದಾಹರಣೆಯಾಗಿ ಪರಮಹಂಸರ ಬಾಲ್ಯ ಚರಿತ್ರೆ