ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ಶ್ರೀ ರಾಮಕೃಷ್ಣಪರಮಹಂಸರ

ಸ್ಯವೇ ಇವರಲ್ಲಿ ವಿಶೇಷ. ಅವರು ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಸಾರಿ ಸಾರಿ ಹೇಳುತ್ತಿದ್ದರೋ ಹಾಗೆಯೇ ಸಾರಿಸಾರಿ “ ಎಲ್ಲಾ ಧರ್ಮವೂ ಸತ್ಯ ; ಎಷ್ಟು ಮತವೋ ಅಷ್ಟು ಪಥ ; ನಮ್ಮ ದೇವರು ಹೆಚ್ಚು ನಿಮ್ಮ ದೇವರು ಕಡಿಮೆ ಎಂದು ಕೀಳುಬುದ್ಧಿಯಿಂದ ಜಗಳವಾಡಬಾರದು[೧] ಯಾರು ಯಾವ ಮಾರ್ಗವನ್ನು ಅನುಸರಿಸಿದ್ದರೆ ಆ ಮಾರ್ಗವನ್ನೇ ಅನುಸರಿಸಲಿ, ಅವರ ಮಾರ್ಗವನ್ನು ಕೆಡಿಸಬೇಡಿ. ಹಿಂದೂ ಮತದಲ್ಲಿಯೂ ದ್ವೈತಾ

  1. ಯಾರಾದರೂ ಕಾಳಿ ಹೆಚ್ಚು- ಕೃಷ್ಣ ಹೆಚ್ಚು ಎ೦ದು ಜಗಳವಾಡುತ್ತಿದ್ದದ್ದನ್ನು ಕಂಡರೆ ಪರಮಹ೦ಸ ರು " ಇದೇನೋ ನಿನ್ನ ಹೀನ ಬುದ್ದಿ ! ನಿನ್ನ ಇಷ್ಟದೇವತೆಯೇ ಕಾಳಿ ಕೃಷ್ಣ ಎಲ್ಲ ಆಗಿದ್ದಾನೆಂದು ತಿಳಿದುಕೊ೦ಡಿರು. ಹಾಗೆ೦ದರೆ ನಿನ್ನ ಇಷ್ಟದೇವತೆಯನ್ನು ಬಿಟ್ಟು ಮತ್ತೊಂದನ್ನು ಪೂಜಿಸಬೇಕೆಂದು ಹೇಳಿದ್ದಲ್ಲ. ದ್ವೇಷ ಬುದ್ದಿಯನ್ನು ಬಿಟ್ಟು ಬಿಡಬೇಕೆ೦ದರ್ಥ, ನಿನ್ನ ಇಷ್ಟದೇವತೆಯ ಕೃಷ್ಣನೂ, ಗೌರಾಂಗನೂ ಆಗಿದ್ದಾನೆ--ಈ ಜ್ಞಾನವನ್ನು ಒಳಗೆ ನಿಶ್ಚಯಬುದ್ದಿಯಿ೦ದ ಇಟ್ಟುಕೊಳ್ಳಬೇಕು. ನೋಡು ! ಹೆ೦ಗಸು ಗಂಡನಮನೆಗೆ ಹೋದರೆ, ಮಾನ, ಅತ್ತೆ, ಅತ್ತಿಗೆ, ಮೈದನ ಮು೦ತಾದವರೆಲ್ಲರಲ್ಲಿಯೂ ಮರ್ಯಾದೆಯಿ೦ದಲೂ, ಭಕ್ತಿಯಿಂದಲೂ ಯಥಾಯೋಗ್ಯವಾಗಿ ನಡೆದುಕೊಳ್ಳುತ್ತಾಳೆ. ಆದರೆ ತನ್ನ ಮನಸ್ಸಿನಲ್ಲಿದ್ದದ್ದನ್ನೆಲ್ಲಾ ನಿಸ್ಸಂಕೋಚವಾಗಿ ಹೇಳುವುದು ಮಲಗುವುದು ಕೂರುವುದು ಇದೆಲ್ಲ ಕೇವಲ ತನ್ನ ಗ೦ಡನಸ೦ಗಡ ಮಾತ್ರ. ತನ್ನ ಗ೦ಡನಿ೦ದ ಅತ್ತೆ ಮಾವ ಮು೦ತಾದವರೆಲ್ಲರೂ ತನ್ನವರಾಗಿದ್ದಾರೆ೦ದು ಅವಳಿಗೆ ಗೊತ್ತಿರುತ್ತದೆ. ಅದರ ಹಾಗೆ ನಿನ್ನ ಇಷ್ಟ ದೇವತೆ ಯನ್ನು ಗ೦ಡನ ಹಾಗೆ ಸೇವಿಸು. ನಿನ್ನ ಇಷ್ಟದೇವತೆಯೊಡನೆ ಸಂಬಂಧವಿರುವದ್ದರಿಂದಲೇ ಅದರ ಇತರ ರೂಪಗಳೊಡನೆ ಸ೦ಬ೦ಧ ; ಅವುಗಳಲ್ಲೆಲ್ಲಾ ಏಕರೀತಿಯಾಗಿ ಶ್ರದ್ಧಾ ಭಕ್ತಿಯನ್ನು ಇಟ್ಟುಕೊಂಡಿರಬೇಕು.---ಹೀಗೆ೦ದು ತಿಳಿದುಕೊ. ಹೀಗೆ ತಿಳಿದುಕೊ೦ಡು ದ್ವೇಷಬುದ್ದಿಯನ್ನು ದೂರಮಾಡು : ಗೌರೀಪ೦ಡಿತನು ಹೇಳುತ್ತಿದ್ದದ್ದೇನೆಂದರೆ " ಕಾಳೀ ಮತ್ತು ಗೌರಾ೦ಗ ಇಬ್ಬರೂ ಒಂದೇ ಎಂದು ತಿಳಿದು ಬಿಟ್ಟರೆ ಆಗ ನಿಜವಾದ ಜ್ಞಾನವು ಉತ್ಪನ್ನವಾಯಿತೆಂದು ಹೇಳಬಹುದು "--ಎ೦ದು ಹೇಳುತ್ತಿದ್ದರು.