ರಲ್ಲಿಯೂ ಸರಳವಾದ ನಡತೆ, ದೇವಭಕ್ತಿ, ಮಾತೃಭಕ್ತಿ ಇವುಗಳು ಕಂಡು ಬರುತ್ತಿದ್ದವು. ಮತ್ತೆ ಕೆಲವು ಕಾಲಗಳಲ್ಲಿ ಎಲ್ಲ ವಿಷಯ ಗಳಲ್ಲಿಯೂ ಔದಾಸೀನ್ಯ, ಯಾರಿಗೂ ಗೊತ್ತಾಗದ ಒಂದು ವಿಷಯಕ್ಕಾಗಿ ವಿಶೇಷ ವ್ಯಾಕುಲತೆ, ಸ್ಮಶಾನಗಳಲ್ಲಿ ಹಗಲು ರಾತ್ರಿಯನ್ನದೆ ಏಕಾಕಿಯಾಗಿ ಹೋಗಿ ಕುಳಿತುಕೊಳ್ಳುವುದು, ಇದ್ದಕ್ಕಿದ್ದಹಾಗೆ. ತಾಯಿ, ತಾಯಿ, ಎಂದು ಅಳುವುದು ಇವು ಕಂಡುಬರುತ್ತಿದ್ದುವು.
ಕ್ರಮಕ್ರಮವಾಗಿ ದೇಹಸ್ಥಿತಿಯು ಮೊದಲಿನಂತೆ ಆಗುತ್ತ ಆದರೆ ಸಾಂಸಾರಿಕ ವಿಚಾರಗಳಲ್ಲಿ ಔದಾಸೀನ್ಯ ಬಾಲ್ಯ ದಲ್ಲಿ ಹೇಗೋ ಈಗ ಯೌವನದಲ್ಲಿಯೂ ಹಾಗೇ ; ಇದನ್ನೆಲ್ಲ ನೋಡಿ ಚ೦ದ್ರಾದೇವಿಯು ಮಗನಿಗೆ ಮದುವೆಮಾಡಿ ಬಿಡುವುದು ಉತ್ತಮವೆಂದು ಸ್ಥಿರಮಾಡಿಕೊಂಡಳು. ಏಕೆಂದರೆ ಮನೆಯಲ್ಲಿ ಹೆಂಡಿರು ಮಕ್ಕಳಿದ್ದರೆ ಅವರ ಸುಖದುಃಖಗಳನ್ನು ನೋಡಿಕೊಳ್ಳ ಬೇಕಾದ ಆವಶ್ಯಕತೆ ಬೀಳುವುದರಿಂದ ಸಂಸಾರದಲ್ಲಿ ಔದಾಸೀನ್ಯವು ತನ್ನಷ್ಟಕ್ಕೆ ತಾನೇ ಹೋಗುವುದೆಂದು ಭಾವಿಸಿದಳು. ಹುಚ್ಚು ಬಿಡುವವರೆಗೂ ಮದುವೆಯಾಗದು, ಮದುವೆಯಾಗುವ ವರೆಗೂ ಹುಚ್ಚು ಬಿಡದು ಎಂಬ ಸಮಚಾರಕ್ಕೆ ಬಂತು. ಮೊದಲೇ ಬಡವರು; ಹುಡುಗನಸ್ಥಿತಿ ನೋಡಿದರೆ ಹೀಗೆ! ಇದನ್ನು ಕಂಡು ಕಂಡು ಹೆಣ್ಣು ಕೊಡುವವರು ಯಾರು? ಎಷ್ಟೆಷ್ಟೋ ಕಡೆ ವಿಚಾರಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಆ ಮುದುಕಿಯು ಪುನಃ ಕೊರಗಲಾರಂಭಿಸಿದಳು. ಆಗ ಒಂದು ದಿನ ಪರಮಹಂಸರು ಭಾವಾವಿಷ್ಟರಾಗಿ “ ಅಲ್ಲಿ ಇಲ್ಲಿ ಹುಡುಕಿ ಪ್ರಯೋಜನವಿಲ್ಲ; ಜಯರಾಮಬಾಟಿದ ಶ್ರೀರಾಮ ಮುಖ್ಯ ಪಾಧ್ಯಾಯನ ಮನೆಗೆ ಹೋಗಿ ನೋಡಿರಿ; ಮದುವೆಯಾಗುವ ಹುಡುಗಿಯನ್ನು ಮುಡುಪು ಕಟ್ಟಿಟ್ಟಿದ್ದಾರೆ”. ಎಂದು ಹೇಳಿದರು. ಆಗ ಆ ಮಾತನ್ನು ಯಾರೂ ಲಕ್ಷ್ಯ ಮಾಡಲಿಲ್ಲ. ಏನಾದರೂ ಆಗಲಿ ಎದ್ದು ಹೋಗುವ ಮಾತು ಬಿದ್ದು ಹೋಗಲಿ ಎಂದು ವಿಚಾ