ಪುಟ:ಶ್ರೀ ಕೃಷ್ಣ ಲೀಲೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪ಕೃಷ್ಣಲೀಲೆ

            ಪ್ರದೇಶ- ಗೋಕುಲ
ಗೋಪ ಗೋಪಿಯರು ನಂದ ಗೋಪನ ಮನೆಯಲ್ಲಿ ಗುಂಪು ಕೂಡುವರು.












ಯಶೋದೆ:- ಈ ದಿವಸವಿಷ್ಟು, ಮಹೋತ್ಪಾತಗಳುಂಟಾಗುವುದ
ಕ್ಕೇನು ಕಾರಣ ? ಭೂಮಿಯು ಕಂಪಿಸಿತು. ಅಂತರಿಕ್ಷದಲ್ಲಿ ಮೇಘಗ
ಳೆಲ್ಲವೂ ವಿವರ್ಣವಾಗಿ ಕಾಣುವುವು. ನನ್ನ ಬಲಗಣ್ಣೇಕೋ ಚಲಿಸು
ತ್ತಿರುವುದು. ಪ್ರತಿ ದಿವಸವೂ ಬಲರಾಮನೂ ಕೃಷ್ಣನೂ ಇಬ್ಬರೂ ಜತೆ
ಯಾಗಿ ಕಾಡಿಗೆ ಹೋಗುತ್ತಿದ್ದರು. ಈ ದಿವಸ ಕೃಷ್ಣನೊಬ್ಬನೇ ಕಾಡಿ
ಗೆ ಹೋಗಿರುವನು. ಈ ದುರ್ನಿಮಿತ್ತಗಳನ್ನು ನೋಡಿದರೆ, ಮನಸ್ಸಿಗೆ
ಬಹಳ ಅನುಮಾನವುಂಟಾಗುತ್ತಿರುವುದು. ಕೃಷ್ಣನನ್ನು ನೋಡುವ