ಪುಟ:ಶ್ರೀ ಕೃಷ್ಣ ಲೀಲೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು. ಶ್ರೀ ಕೃಷ್ಣಲೀಲೆ ಪಂಚಮಾಂಕಂ ಪ್ರಥಮರಂಗಂ. ಪ್ರದೇಶ- ಮಧುರಾಪುರದ ಮಾರ. ನಾರದರು ಗೋಕುಲಕ್ಕೆ ಬಂದು ಶ್ರೀ ಕೃಷ್ಕಮಗ್ರಿಯನ್ನು ಸಂದರ್ಶಿಸಿ, ಅಲ್ಲಿಂದ ಮಧುರಾಪುರವನ್ನು ಕುರಿತು ತರಳುವರು, ನಾರದ:- ರಾಗ-ಆರಭಿ-ಏಕತಾಳ. ಶ್ರೀ ಯದುಕುಲವಾರಿಧಿಚಂದ್ರ | ಸಕಲ ಸುಗುಣಸಾಂದ್ರ ಶ್ರೀ ಪ॥ ಪರಮ ಕರುಣ ಶುಭಚರಣ ಮುನಿವಿನುತ ಶರಧಿಶಯನ ಸುರಸೇವಿತಮಹಿ ಮಾ | ಶ್ರೀ ಅಪ। ಘೋರದುಃಖ ಪರಿಹಾರ ದನುಜಸಂಹಾರ ಸಜ್ಜನ ಧಾರ ನಿರಲಾಕಾರ ಗೋಕುಲವಿಹಾರ ನಿತ್ಯಶಿವರಾಮಚಿತ್ತಸಂಚಾರಪರಾ ಕೃರ " ಶ್ರೀ | ಭಕ್ತವತ್ಸಲನಾದ ಭಗವಂತನು ಗೋಕುಲದಲ್ಲಿ ತೋರ್ಪಡಿಸು ತಿರುವ ಲೀಲಾನಿಕೇಷಗಳನ್ನು ನೋಡಿ ಬ್ರಹಾದಿಗಳುಕೂಡಾ ಚಕಿತ ರಾಗುತ್ತಿರುವರು. ಗೋಪಬಾಲಕರೊಂದಿಗೆ ತಾನೂ ಒಬ್ಬಗೋವಾ ಲಕನಂದದಿ ಗೋವುಗಳನ್ನು ಮೇಯಿಸುವಂತೆ ನಟಿಸುತ್ತ ಬೃಂದಾ ರಣ್ಯದಲ್ಲಿರುವ ದುಷ್ಟ ರಕ್ಕಸರನ್ನು ಸಮಯೋಚಿತವಾಗಿ ಸಂಚರಿಸುತ್ತಿ ರುವನು, ಮೊಟ್ಟಮೊದಲು ಪ್ರತನೆಯನು ವಧಿಸಿದನು. ತದನಂ ತರ ಶಕಟಾಸುರ, ತೃಣಾವರ, ನತಾಸುರ, ಬಕಾಸುರ, ಧೇನುಕಾ ಸುರರಾದಿಯಾಗಿ ದುಷ್ಟ ರಾಕ್ಷಸರನ್ನು ಸಂಹರಿಸಿದನು. ಭಯಂಕರ