ಪುಟ:ಶ್ರೀ ಕೃಷ್ಣ ಲೀಲೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಕ೦. ೧೩ ನಾದ ಕಾಳೀಯನನ್ನು ಮರ್ದಿಸಿ ಸಮುದ್ರಕ್ಕೆ ಹೊರಡಿಸಿದನು. ದಾವಾ ಗ್ನಿಯನ್ನು ನುಂಗಿ ಗೋವುಗಳನ್ನೂ ಗೋಪಸಂಘವನ್ನೂ ಕಾವಾ ಡಿದನು, ಕುದ್ರ ಪೂಜಾರೂಪವಾದ ಇಂದ್ರಯೋಗವನ್ನು ನಿಲ್ಲಿಸಿ ಅಹಿಂ ಸಾಧರವನ್ನು ಸ್ಥಾಪಿಸಿದನು. ಗೋವರ್ಧನಪರ್ವತವನ್ನು ಬೆರಳಿನಿಂದ ದೇವೇಂದ್ರನ ಗರ್ವವನ: ಭಂಗಪಡಿಸಿದನು ಇಂತು ಗೋಪಾಲಬಾಲ ನಂದದಿ ಭಗವಂತನು ಶೂರ್ದಡಿಸುತ್ತಿರುವ ಲೀಲಾ ವಿನೋದಗಳು ಒಂದೊಂದೂ ಅತ್ಯದ್ಭುತವಾಗಿರುವುವು. ಸರ್ವಜ್ಞನಾದ ತಾನು ಶ್ರೀ ರಾಮಾವತಾರವನ್ನು ಧರಿಸಿ ಆರಣ್ಯವಾಸದಲ್ಲಿದ್ದಾಗ, ಸಚ್ಚಿದಾನಂದ ಸ್ಪರೂಪನಾದ ತನ್ನ ನ್ನು ನೋಡಿ ಬ್ರಹ್ಮರ್ಷಿಗಳು ಸಹ ಭ್ರಮಿಸು ವಂತ ರಾರಾಜಿಸಿದನು. ಆಗ ತನ್ನ ಸರ್ವಾಂಗ ಸೌಂದರವನ್ನು ನೋಡಿ ಸಮ್ಮೋಹಿತರಾದ ಬ್ರಹ್ಮರ್ಷಿಗಳು, ತನ್ನನ್ನು ಆಲಿಂಗನ ಮಾಡಿ ಕೊಳ್ಳಬೇಕೆಂದು ಬಯಸಿದಾಗ, ಅವರ ಅಭಿಷ್ಟ್ಯವು ಆಗ ಸಾಧ್ಯವಿಲ್ಲ ವೆಂತಲೂ, ತಾನು ಕೃಷ್ಣಾವತಾರವನ್ನು ಧರಿಸಿದಾಗ ಬ್ರಹ್ಮಋಷಿಗಳೆ ಲ್ಲರೂ ಗೋಕುಲದಲ್ಲಿ ಗೋಖನಿಯರಾಗಿ ಹುಟ್ಟಬೇಕಂತಲೂ, ಹಾಗೆ ಹುಟ್ಟಿದಾಗ ಅವರ ಇಷ್ಟಾಥ್ಯವನ್ನು ಸಫಲಗೊಳಿಸುವಂತೆಯೂ ವಾಗ್ದಾನಮಾಡಿದನು. ಅದರಂತೆಯೇ ಬ್ರಹ್ಮವೇತ್ತರಾದ ಋಷಿಮುನಿ ಗಳು ಈಗ ಗೋಪಿಯರಾಗಿ ಹುಟ್ಟಿರುವರು. ಶ್ರೀರಾಮಾವತಾರದಲ್ಲಿ ತಾನುಮಾಡಿದ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಸತ್ಯವ್ರತ ನಾದ ಭಗವಂತನು ಅತ್ಯಂತಪುಣ್ಯದಿವಸವಾದ ಮಾರ ಶಿರ ಶುಕ್ಲ ಪಾಡ್ಯ ಮಿಯ ದಿವಸ, ಯಮುನಾಜಲದಲ್ಲಿ ಗೋಪಿಯರು ಮಂಗಳಸ್ನಾನ ಮಾಡುತ್ತಿರುವ ಸಮಯವನ್ನು ತಿಳಿದು, ಅವರ ವಸ್ತುಗಳನ್ನ ಸಹ ರಿಸಿ, ನದೀತೀರದಲ್ಲಿರುವ ಕಡಗದ ಮರವನ್ನೇರಿ ಕುಳಿತನು. ಗೋಪಿ ಯರು ತಮ್ಮ ವಸ್ತ್ರಗಳನ್ನು ಕಾಣದೆ, ಸ್ಪಲ್ಪ ಹೊತ್ತು ವಿಚಾರಮಗ್ನ ರಾಗಿದ್ದು, ಅದು ಕೃಷ್ಣನ ಕಾವ್ಯವೆಂದರಿತು, ವಸ್ತ್ರಗಳನ್ನು ಕೊಡೆಂ ದು ಬೇಡಲಾಗಿ ವಿಗಳಿತವರಾದ ಅವರಿಂದ ನಮಸ್ಕಾರಗಳನ್ನು ಪಡೆದು ವಸ್ತ್ರಗಳನ್ನ ನುಗ್ರಹಿಸಿದನು. ಭಗವಂತನ ದಿವ್ಯಸಂದರ್ಶ ನಾಪೇಕ್ಷಿಗಳಾದ ಬ್ರಹ್ಮನಿರು ಅಜ್ಞಾನಾವರಣವನ್ನು ಪರಿತ್ಯಜಿಸಿದ ಹೊರತು, ಹೀಗೆ ಪರಮಾರಸಿದ್ದಿಯಾಗುವುದಿಲ್ಲವೋ, ಅದರಂತೆಯೇ _