ಪುಟ:ಶ್ರೀ ಕೃಷ್ಣ ಲೀಲೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣ ಲೀಲೆ ಗೋಪಿಯರು:- ರಾಗ-ಕಲ್ಯಾಣಿ-ಚ೦ಪೆ. ನಮೋಭಕ್ತ ಸುರತರುಲತೇದೇವಿಲಲಿತೇ || ಪ || ತ್ರಿಪುರಸುಂದರಿ ಕೃಪಾಪಾ೦ಗಲಲಿತೇ | ಚಂದ್ರಚೂಡಃ ಯೇಚ೦ಪ್ರತಿಲಕಾ ಲಿಕೇ, ಚಂದ್ರಮುಖಿ ಚಂದ್ರಿಕಾಮಂದಹಾಸೇ ! ಕುಂದಸುಂದರರದನ ಬಂಧುಜೀವಾಧರೇಕೋಟಿವಿದತ ಬೃಂದ ಭ ಸೇ ! ನಮೋಭಕ್ತ || ದರದಲಿತಕಮಲನುಕುಲೋಚ್ಚಲಿತ ಮದಕ ವಿತವಿಲಸದಲಿ ಲಲಿತ ಲೋಚನವಿಶಾಲೇ ಅಧರರಾಗಾ : ಣೆ ದರ ವಿಧ್ವತ ದೈತ್ಯಗುರು ಗುಚಿರು ಚಿರಕ್ಕಿ ಕೊಲ್ಲಸಿತನಾಸೇ || ನಮೋ ಭಕ್ತ || ಹಂಸಗಮನೇ ಸಕಲ ನಿಗಮವನಶಾರಿಕೆ ಹಂಸಮುನಿಹಂಸಮಾನಸವರಾ ಈ ! ಕೆ೦ಸರಿಪುಸೋದರೀಕಾಮಿತಾರ ಪ್ರದೇ ತಾ೦ಶರಣ್ಯಂ ಕಾಳಿದಾಸ ವರದೇ || ನಮೋಭಕ್ಕ ||* ಜಗಜ್ಜನನೀ ! ಜಗದ್ವ೦ದ್ಯಮಾನಚರಣಸರಸೀರುಹೇ! ವಾಮದೇವಾರ್ಧ ಶರೀರೇ ! ಪೂರ್ಣಚಂದ್ರ ಕೋಟಿ ಕೋಟಿನಿಭಾನನೇ ! ಪದ್ಮರಾಗವಿರಾಜಮಾನ ಕರ್ಣಿಕೇ ! ನಿಖಿಲಮಣಿಗಣಕಿರಣ ಕೇಸರ ಸಮುದi ! ಸುಗಂಧಬಂಧುರೇ ! ಇಚ್ಛಾ-ಜ್ಞಾನ-ಕ್ರಿಯಾಶಕ್ತಿಸ್ವರೂಪೇ ! ಸಕಲಕಲ್ಯಾಣಗುಣಾಭರಣೇ ! ಸರ್ವ ಮಂಗಳೇ ! ಭಕ್ತವತ್ಸಲೇ ! ಶ್ರೀ ! ಲಕ್ಷ ! ಔಪಲೇ ! ಅಂಬಿಕೆ ! ವಿಜಯೇ ! ಜಯೇ ! ನಿನ್ನ ಪಾದಾರವಿಂದಗಳಿಗನಂತ ಕೋಟಿ ನಮಸ್ಕಾರಗಳು ! ದೇವೀ ! ಶ್ರೀಕೃಷ್ಟಮೂರಿಗೆ ನಮ್ಮಲ್ಲಿ ನಿಷ್ಕಳಂಕ ವಾದ ಪ್ರೇಮವುಂಟಾಗುವಂತೆ ಅನುಗ್ರಹಿಸು, (ಎಂದೆಲ್ಲರೂ ನಮಸ್ಕರಿಸುವರು.] ಗೌರಿ:-ಗೋಪಿಯರೇ! ನಿಮ್ಮ ಭಕ್ತಿಗೆ ಮೆಚ್ಚಿ ದೆನು. ಶ್ರೀಪತಿಯು ನಿಮ್ಮನ್ನು ತಾವವನ್ನು ಕ್ಷಿಪ್ರದಲ್ಲಿಯೇ ಪರಿಹರಿಸುವನು, ನೀವು ಕೃಷ್ಮ ಪರಮಾತ್ಮನಲ್ಲಿ ಏಕಾಂತ ಭಕ್ತಿಯನ್ನಾಚರಿಸಿರಿ ! ಈ ಕುಂಜವನ ದಲ್ಲಿ ಯ ನಿಮಗೆ ಶ್ರೀಕೃಸಂದರ್ಶನವು ಲಭಿಸುವುದು !

  • ಈ ಅಂಬಾಸ್ತೋತ್ರವು ಕಾಳಿದಾಸ ವಿರಚಿತ ವು. ಈ ಮಹಾ ಕವಿಯು ಜಗ ದಂಬೆಯಾದ ಪಾರ್ವತಿಯ ಅನುಗ್ರಹವನ್ನು ಪ್ರತ್ಯಕ್ಷವಾಗಿ ಪಡೆದವನು. ಈ ಸಂದ ರ್ಭದಲ್ಲಿ ಮನಃಪೂರ್ವಕವಾದ ನನ್ನ ಧನ್ಯವಾದಗಳನ್ನು ಈ ಕವಿಕುಲತಿಲಕನಿಗೆ ಸಮರ್ಪಿಸಬೇಕಂತಲೇ ಈ ಸ್ತೋತ್ರವನ್ನಿಲ್ಲಿ ಸಂಗ್ರಹಿಸಿರುವೆನು, (ಗ್ರಂಥಕ,)