ಪುಟ:ಶ್ರೀ ಕೃಷ್ಣ ಲೀಲೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದ್ವಿತೀಯಾಂಕಂ

೨೧



ವಸುದೇವ:-ಹಾಗೆ ನಿನಗೆ ಸಂಶಯ ವಿರುವ ಪಕ್ಷಕ್ಕೆ, ಈಕೆಗೆ
ಎಂಟುಮಂದಿ ಶಿಶುಗಳಾಗುವ ಪರ್ಯಂತವೂ ನಾವು ನಿನ್ನ ಮನೆಯಲ್ಲಿ
ಯೇ ಇರುವೆವು.

ಕಂಸ:-ಒಳ್ಳೆಯದು, ಆಗಲಿ, ನೀವಿಬ್ಬರೂ ನಮ್ಮ ಮನೆಯಲ್ಲಿ
ಯೇ ಇರಬೇಕು. ಮತ್ತು ದಿವಸಕ್ಕೊಂದು ಸಾರಿಯಾದರೂ ನನ್ನನ್ನು
ಕಾಣಿಸಿಕೊಳ್ಳಬೇಕು.

     ವಸುದೇವ- ನಿನ್ನಿಷ್ತದಂತಾಗಲಿ.
     ಕಂಸ:- ತೆರಳಿರಿ. ಮಧುರೆಗೆ ಹೋಗುವ.
     ವಸುದೇವ- ಅಪ್ಪಣೆ.
             (ಮೂವರೂ ಮಧುರೆಗೆ ತೆರಳುವರು.)

*** *** *** *** ** *** *** ***

ದ್ವಿತೀಯಾಂಕಂ--ತೃತೀಯ ರಂಗಂ.

*** *** *** *** ** *** *** ***

              ಪ್ರದೇಶ:- ಮಧುರಾಪುರ.
                  ಕಂಸನ ದರ್ಬಾರ್.

    ಕಂಸನು ಸಿಹ್ಮಾಸನದ ಮೇಲೆ ಕುಳಿತಿರುವನು. ಮಂತ್ರಿ ಸೇನಾ
ಪತಿಗಳು ಅವರವರ ಪೀಠಗಳಲ್ಲಿ ಕುಳಿತಿರುವರು. ಅಘಾಸುರ, ಧೇನು
ಕಾಸುರ, ವತ್ಸಾಸುರ, ಚಾಣೂರ ಮುಂತಾದವರು ಒಂದೇ ಧ್ವನಿ
ಯಿಂದ ಕಂಸನನ್ನು ಹೊಗಳುತ್ತಿರುವರು.

  ಸೀ|| ಶ್ರೀಮದಾಖಂಡಲೋದ್ದಂಡ ಭೂಮಂಡಲಾಧೀಶ ಸಂಪೂರ್ಣ ಸಾಮ್ರಾಜ್ಯ
      ಮಸ್ತು| ದೇಶದೇಶಾಂತರಾಧೀಶ ಸಂಪೂಜಿತಾ ಶೇಷ ಸಮಂಚಿತ ಸೌಖ್ಯಮಸ್ತು|
      ಶೌರ್ಯ ಸಾಹಸ ವಿಕ್ರಮೌದಾರ್ಯ ವೈಭವೋಪೇತ ವಿಸ್ತಾರ ದಿಗ್ವಿಜಯ ಮಸ್ತು|
      ದೇವ ಗಂಧರ್ವ ಕಿನ್ನರ ಯಕ್ಷ ರಾಕ್ಷಸ ಪ್ರಮುಖ ಸನ್ನುತ ನಿತ್ಯಕೀರ್ತಿರಸ್ತು||

  ಗೀ|| ಪ್ರಣಮಿತಾಶೇಷ ಲೋಕೈಕ ಪ್ರಭುವರೇಣ| ಶತ್ರು ನಿರ್ಮೂಲನಾಧಿಕ ಶಕ್ತಿಧುರ್ಯ|
       ವೀರವೀರಾಧಿವೀರ ದಾನವ ಸಮೇತ | ಸ್ವಸ್ತಿ ತುಭ್ಯಂ ಸದಾ ಕಂಸ ಸಾರ್ವಭೌಮ ||