ಪುಟ:ಶ್ರೀ ಕೃಷ್ಣ ಲೀಲೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೪೬ಕೃಷ್ಣಲೀಲೆ

ದೇವಕಿ:-(ಗಾಬರಿಯಿಂದ) ನಾಥಾ ! ಎಲ್ಲಿಗೆ ಹೊರಡುವಿರಿ ?

ವಸುದೇವ-ಪ್ರಿಯೇ ! ಸಂತೋಷದ ಸಂಭ್ರಮದಲ್ಲಿ ಕರ್ತವ್ಯ
ವನ್ನು ಮರತೇ ಬಿಟ್ಟೆವು. ಈ ಬಾಲಕನನ್ನು ಗೋಕುಲದಲ್ಲಿ ಬಿಟ್ಟು,
ನಂದಗೋಪನ ಶಿಶುವನ್ನಿಲ್ಲಿಗೆ ತರಬೇಕಲ್ಲವೆ?

ದೇವಕಿ:-ಹಾ ದೈವವೆ! ಈ ಸುಕುಮಾರನನ್ನು ಬಿಟ್ಟು ನಾ
ನೆಂತು ಜೀವಿಸಲಿ?

ವಸುದೇವ:- ..ದೇವೀ ! ಶೋಕಿಸಬೇಡ, ನಾವು ಹತಭಾಗ್ಯರು
ಈ ಮುದ್ದುಕಂದನ ಬಾಲಲೀಲೆಗಳನ್ನು ನೋಡಿ ಆನಂದಿಸುವ ಭಾಗ್ಯವು
ನಮಗೆ ಲಭ್ಯವಿಲ್ಲವು. ಸುಕೃತಜನ್ಮಳಾದ ಯಶೋದೆಯೂ,
ಮಹಾತ್ಮನಾದ ನಂದಗೋಪನೂ ಈ ಪುಣ್ಯವನ್ನು ಪಡೆದುಬಂದಿರು
ವರು. ಈಗಾಗಲೇ ಬಹಳ ಹೊತ್ತಾಯಿತು. ಕೊಡು ! ಕೊಡು!
ಬಾಲಕನನ್ನಿಲ್ಲಿ ಕೊಡು !!!
      [ಎಂದು ವಸುದೇವನು ದೇವಕಿಯ ಕೈಯಿಂದ ಶಿಶುವನ್ನು ತೆಗೆ
ದುಕೊಂಡು, ಸೆರೆಮನೆಯನ್ನು ಬಿಟ್ಟು ಹೊರಡುವಾಗ್ಗೆ ಬಾಗಿಲುಗಳೆ
ಲ್ಲವೂ ತಾವಾಗಿಯೇ ತರೆದುಹೋಗುವುವು. ಕಾವಲುಗಾರರು ಗಾಢ
ನಿದ್ರಾಪರವಶರಾಗಿರುವರು. ವಸುದೇವನು ನಿರಾತಂಕವಾಗಿ ಹೊರಡು
ವನು.]


            ತೃತೀಯಾಂಕಂ-ತೃತೀಯರಂಗಂ.

            ಪ್ರದೇಶ:— ಯಮುನಾನದೀ ತೀರ.
       [ನಾವಿಕರು ಹಡಗು ನಡಿಸುತ್ತ ಹಾಡುತ್ತಿರುವರು]

             ರಾಗ-ಶಂಕರಾಭರಣ-ಆಟ.
   ಜೊರ್ಸ, ಬಾರ್ಸೇ, ವಾರ್ಸೇ || ಪ ||
   ಅಂಗಜನಯ್ಯನ ಪಾದದಿ ಪುಟ್ಟಿದ, ಗಂಗಮ್ಮ ತಾಯಿಗೇ ರಂಗು ಪೂಮಾಲೆ||
   ಜೋರ್ಸೇ|| ಅ-ಪ ||
   ಯಮುನಾತಾಯಿಗೆ ಒಳ್ಳೇ ಕಮಲ ಪುಷ್ಪದ ಮಾಲೆ,
   ತಪತಿ ತಾಯಿಗೆ ಜಾಜಿ ಕುಸುಮ ಮಾಲೆ||ಜೋರ್ಸೇ||
   ಗೋದಾವರಿ ತಾಯಿಗೆ ಗೋರಂಟಿ ಹೂಮಾಲೆ,