ಪುಟ:ಶ್ರೀ ಕೃಷ್ಣ ಲೀಲೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



3



ಚರಿತ್ರೆಯನ್ನು ಪ್ರಸ೦ಗಮಾಡಿದನು. ಆ ವಿವರವಿಲ್ಲಿ ಸೂಚಿಸಲ್ಪಡು
ತ್ತದೆ. ಶ್ರಿಯಃಪತಿಯಾಗಿ, ಶ್ರೀ ವೈಕು-ಠನಿಕೇತನನಾಗಿ, ಶ್ರೀ ಭೂ
ನೀಳಾಸಮೇತನಾಗಿ, ಶೇಷಪರ್ಯಂಕದಲ್ಲಿ ನಿತ್ಯಾನಂದಮಯನಾಗಿ ಪವಡಿ
ಸಿದ್ದ ಭಗವಂತನ ಸನ್ನಿಧಿಗೆ,ಬ್ರಹ್ಮೇ೦ದ್ರಾದಿ ದೇವತೆಗಳೂ,ಋಷಿಮುನಿ
ಗಳೂ ಬಂದು ಕಂಸಾದಿ ದುಷ್ಟರಾಕ್ಷಸರ ಹಾವಳಿಯನ್ನು ಬಿನ್ನವಿಸ
ಲಾಗಿ ಭಗವಂತನು ಶ್ರೀ ಕೃಷ್ಣಾವತಾರವನ್ನು ಪರಿಗ್ರಹಿಸಿ ದುಷ್ಟರಾದ
ರಕ್ಕಸರನ್ನು ಸಂಹರಿಸಿ ಲೋಕೋದ್ಧಾರಮಾಡುವುದಾಗಿ ಸೂಚಿಸಿ,
ಅಭಯಹಸ್ತವನ್ನಿತ್ತುಬ್ರಹ್ಮಾದಿಗಳನ್ನು ಕಳುಹಿಸಿಕೊಟ್ಟನು.

ಶ್ಲೋ|| ತತೋಹಂಸಂಭವಿಷ್ಯಾಮಿ ದೇವಕೀಜಠರೇಶುಭೇ | ಗರ್ಭೇ
       ತ್ಯಯಾಯಶೋದಾಯಾ| ಗಂತವ್ಯಮವಿಲಂಬಿತಂ||
       ಪಾ,ವೃಟ್ಕಾಲೇಚನಭಸಿ | ಕೃಷ್ಣಾಷ್ಪಮ್ಯಾಮಹಂನಿಶಿ| ಉತ್ಪ
       ತ್ಸ್ಯಾಮಿನವಮ್ಯಾಂಚ | ಪ್ರಸೂತಿಂತ್ಯಮವಾಪ್ಸ್ಯಸಿ|| ದೇವಕೀ
       ಚಯಶೋದಾಚ | ಸುಷುವಾತೇಸಮಂತಾದಾ | ಯಾಮೇವರ
       ಜನೀಂಕೃಷ್ಣೋ | ಜಜ್ಣೀವೃಷ್ಟಿಕುಲೇಪ್ರಭುಃ || ತಾಮೇವರ
       ಜನೀಂಕನ್ಯಾಂ | ಯಶೋದಾದೇವ್ಯಜಾಯತ | ಅಷ್ಟಮ್ಯಾಂ
       ಶ್ರಾವಣೇಮಾಸಿ | ಕೃಷ್ಣಪಕ್ಷೇಮಹಾತಿಥೌ || ರೋಹಿಣ್ಯಾ
       ಮರ್ಧರಾತ್ರೇಚ | ಸುಧಾಂಶಾವುದಯೋನ್ಮುಖೇ | ದೇವಕ್ಯಜನ
       ಯದ್ಯಿಷ್ಟುಂ| ಯಶೋದಾತಾಂತುಕನ್ಯಕಾಂ | ಮುಹೂ
       ರ್ತೇಭಿಜಿತಿವ್ರಾಪ್ತೇಹ್ಯರ್ಧರಾತ್ರೇಸುಖಾವಹೇ || ವಸುದೇವ
       ಸ್ತತೋಗತ್ಯಾ | ದೇವಕೀಗರ್ಭವೇಶ್ಮತತ್ | ದದರ್ಶದೇವ
       ದೇವೇಶಂ | ರಾತ್ರೌಜಾತಮಧೋಕ್ಷಜಂ|| ಶಯಾನಮಾಂಬು
       ಜೇವತ್ರೇ| ವಟವತ್ರೇಯಥಾಪುರಾ| ಪ್ರಾಚೀನಶಿರಸಂದೇವಂ
       ಪಶ್ಚಿಮನ್ಯಸ್ತವಾದಕಂ||

       ಸತ್ಯವ್ರತನಾದ ಭಗವಂತನು, ತನ್ನ ವಾಕ್ಯಪರಿಪಾಲನಾರ್ಥವಾಗಿ
ಬಹ್ಮಪ್ರಳಯಾನಂತರವಾದ ಇಪ್ಪತ್ತೆಂಟನೇ ಮಹಾಯುಗಕ್ಕೆ ಸೇರಿದ
ಈ ಕಲಿಯುಗಕ್ಕೆ ಪೂರ್ವದ ದ್ವಾಪರಯುಗದಲ್ಲಿ 8,63,874 ವರ್ಷ
ಗಳು, 4 ತಿಂಗಳು, 21 ದಿನಗಳು ಕಳೆದನಂತರ ಸಂಭವಿಸಿದ ಶ್ರೀಮುಖ