ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
83

ಭೀಕರ ಕ್ರಿಯೆ ಪ್ರತಿಕ್ರಿಯೆಗಳು :
ಬಸವಣ್ಣನವರು ತಮ್ಮ ಉಜ್ವಲ ಬುದ್ಧಿಯಿಂದಲೂ ನಿರ್ಮಲ ಚಾರಿತ್ರ್ಯದಿಂದಲೂ ದಿವ್ಯ ಅನುಭಾವದಿಂದಲೂ ಅದ್ಭುತ ಪವಾಡಗಳಿಂದಲೂ ಬಿಜ್ಜಳರಾಯನ ಮೇಲೆ ತುಂಬ ಪ್ರಭಾವವನ್ನು ಬೀರಿದ್ದರು. ಅದರಲ್ಲಿ ಒಲವಿನ ಆಪ್ತಸಂಬಂಧ ಬೇರೆ. ಆದುದರಿಂದ ಬಸವಣ್ಣನವರ ಮತ ಪ್ರಸಾರದ ಕಾರ್ಯದಲ್ಲಿ ರಾಯನು ಕೈ ಹಾಕುತ್ತಿರಲಿಲ್ಲ, ಅದರ ಮೂಲಕ ಈ ನೂತನ ಮತಕ್ಕೆ ಬಸವಣ್ಣನವರ ಮುಖಾಂತರ ಒಂದು ಬಗೆಯಾಗಿ ರಾಜಾಶ್ರಯವು ದೊರೆತುದರಿಂದ, ಆ ಮತವನ್ನು ಸ್ವೀಕರಿಸಿದ ಜನರು ನಿರ್ಭಯರಾಗಿ, ವೈಭವದಿಂದಲೂ ಉತ್ಸಾಹದಿಂದಲೂ ಸಮಾಜದಲ್ಲಿ ಬಾಳತೊಡಗಿದರು. ಎಲ್ಲೆಡೆ • ವಿಭೂತಿ- ರುದ್ರಾಕ್ಷಿಗಳನ್ನೂ ಅಂಗದ ಮೇಲೆ ಲಿಂಗವನ್ನೂ ಧರಿಸಿದ ವೀರಶೈವರು ಗೌರವದಿಂದ ಮೆರೆಯತೊಡಗಿದರು. ತಮ್ಮ ತಮ್ಮ ಕಾಯಕಗಳಲ್ಲಿಯೂ ಗುರು-ಲಿಂಗ-ಜಂಗಮರ ಸೇವೆಯಲ್ಲಿಯೂ ನಿರತರಾಗಿದ್ದರು. ಬಸವಣ್ಣನವರ ನವಮತವು ಅವರಿಗೆ ಆತ್ಮಗೌರವವನ್ನೂ ನವಜೀವನವನ್ನೂ ನೀಡಿತು. ಅದರ ಫಲವಾಗಿ ಅವರಲ್ಲಿ ಉತ್ಸಾಹಕ್ಕೆ ಉಕ್ಕೇರಿತು ; ಹುರುಪಿನ ಹೊಳೆಗೆ ನೆರೆ ಬಂದಿತು; ಅದು ಕೆಲವೆಡೆ ಮೇರೆಯನ್ನು ಮೀರಿ, ಇಡಿ ಸಮಾಜವನ್ನೇ ಆವರಿಸಲು ಹವಣಿಸಿತು. ರಾಜಸ-ತಾಮಸ ಭಕ್ತರು ತಮ್ಮ ಉತ್ಸಾಹಭರದಲ್ಲಿ ನಡೆಯಿಸಿದ ಪರಮತಗಳ ವಿಡಂಬನ-ಖಂಡನೆಗಳ ಅತಿರೇಕವೂ ಅದಕ್ಕೆ ಲಭಿಸಿ, ಅದೇ ಬಗೆಯ ಪ್ರತಿಕ್ರಿಯೆಯೂ ಸಮಾಜದಲ್ಲಿ ಕೋಲಾಹಲವನ್ನು ಎಬ್ಬಿಸಿತು.
ಸನಾತನಿಗಳು ಅವರ ವಿಡಂಬನಗಳಿಂದ ರೇಗಿಗೆದ್ದರು. ಕೆಲವರು ತಮ್ಮ ಧರ್ಮವೇ ಅಳಿಯಬಹುದು ಎಂದು ಗಾಬರಿಗೊಂಡರು. ಕೂಡಲೇ ಅವರು ಬಿಜ್ಜಳರಾಯನ ಆಪ್ತಸ್ನೇಹಿತರಾದ ನಾರಾಯಣಭಟ್ಟ ಮಂಚಯ್ಯ ಇತ್ಯಾದಿ ಹಿರಿಯರ ಮುಖಾಂತರ ತಮ್ಮ ದೂರನ್ನು ಆಗಾಗ ರಾಯನಿಗೆ ತಿಳಿಸತೊಡಗಿದರು. ಕೆಲವು ಸಲ ಈ ನೂತನ ಮತದ