ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

84
ಬಗೆಗೂ ಪರಕೀಯರ ಬಗೆಗೂ ಅಲ್ಲದ ಸಲ್ಲದ ಸಂಗತಿಗಳನ್ನು ಅರುಹಿ, ಅವರು ರಾಯನ ಮನಸ್ಸನ್ನು ಕಲುಷಿತ ಮಾಡತೊಡಗಿದರು. ಅವನ ಮನಸ್ಸಿನಲ್ಲಿ ವಿಷವನ್ನು ಬೀರತೊಡಗಿದರು :
“ಅಯ್ಯಾ, ಅರಸರೇ ! ತಮ್ಮ ದಂಡನಾಯಕನ ಅನುಯಾಯಿಗಳು ತುಂಬ ಉದ್ಧತರಾಗಿರುವರು. ಅವರ ಸೊಕ್ಕು ತಲೆಗೇರಿ, ಅವರು ನಮ್ಮನ್ನೂ ನಮ್ಮ ಪವಿತ್ರವಾದ ಸನಾತನ ಧರ್ಮವನ್ನೂ ಮನಬಂದಂತೆ ತೆಗಳಲಿರುವರು. ಅದರ ಮೂಲಕ ನಮಗೆ ಮರ್ಯಾದೆಯಿಂದ ಬಾಳುವುದೂ ಅಸಾಧ್ಯವಾಗಿದೆ. ಅದಕ್ಕಾಗಿ ತಾವು ಅವರ ಈ ಔದ್ದತ್ವವನ್ನು ಕೂಡಲೇ ನಿಯಂತ್ರಿಸಬೇಕು... ನಮ್ಮ ಮಾತು ಹಾಗಿರಲಿ! ತಮ್ಮ ಅನ್ನವನ್ನುಂಡು ಕೊಬ್ಬಿದ ಈ ಬಸವನು ತಮ್ಮನ್ನು ನಿಂದಿಸಲು ಕೂಡ ಹಿಂಜರಿಯುವುದಿಲ್ಲ. 'ಆ ಭವಿ ಬಿಜ್ಜಳನಿಗೆ ನಾನು ಅಂಜುವೆನೇ?' ಎಂಬುದಾಗಿ ತನ್ನ ಅನುಯಾಯಿಗಳೆದುರು ತನ್ನ ಜಂಬ ಕೊಚ್ಚಿಕೊಳ್ಳುವ. ಇಷ್ಟೇ ಅಲ್ಲ, ಅವನು ತಮ್ಮ ಆಪ್ತನಿರುವದರಿಂದ ಈವರೆಗೆ ತಮಗೊಂದು ಸಂಗತಿಯನ್ನು ಅರುಹಲು ನಮಗೆ ಧೈರ್ಯ ಸಾಲಲಿಲ್ಲ. ಆದರೆ ಇಂದು ತಮ್ಮ ಸಿಂಹಾತನವೇ ತಮ್ಮ ಕೈ ಬಿಡಬಹುದು. ಆ ಭಯವು ಸನ್ನಿಹಿತವಾಗಿರುವುದರಿಂದ ನಾವು ಅದನ್ನೀಗ ತಮಗೆ ಅರುಹುವ ಸಾಹಸವನ್ನು ಮಾಡಲಿರುವೆವು. ದಯವಿಟ್ಟು ಮನ್ನಿಸಬೇಕು... ಈ ಬಸವಣ್ಣನು ತಮ್ಮ ಭಾಂಡಾರವನ್ನು ಬರಿದಾಗಿ ಮಾಡಿ, ಅದರ ನೆರವಿನಿಂದ ಒಂದು ಗುಪ್ತಸೈನಿಕ ದಲವನ್ನು ನಿರ್ಮಿಸಿರುವ. ಜಂಗಮವೇಷಧಾರಿಗಳಾದ ಈ ಸೈನಿಕರು ಸಕಾಲಕ್ಕೆ ತಮ್ಮ ನಿಜರೂಪವನ್ನು ಪ್ರಕಟಿಸಿ, ತಮ್ಮನ್ನು ಸಿಂಹಾಸನದಿಂದ ತಳ್ಳಿ, ಅದನ್ನು ಬಸವಣ್ಣನವರಿಗೆ ಸಲ್ಲಿಸದಿರರು... ಆದುದರಿಂದ ಜೋಗೆ!
ಈ ಮಾದರಿಯ ದೂರುಗಳು ಆಗಾಗ ಬಿಜ್ಜಳರಾಯನ ಕಿವಿಯನ್ನು ತಟ್ಟಿ ಅವನ ಮನಸ್ಸನ್ನು ಅನೇಕ ಸಲ ಕಲಕಿಸಿದ್ದವು. ಒಮ್ಮೊಮ್ಮೆ ಈ ದೂರುಗಳ ಸತ್ಯತೆಯನ್ನು ಪರಿಕಿಸಲು ಬಿಜ್ಜಳನು ತನಿಖೆಯನ್ನು ನಡೆಯಿಸಿದಾಗ ಅವು ಹುರುಳಿಲ್ಲದವು ಎಂಬುದನ್ನು ಆತನು ಅರಿತಿದ್ದನು.