ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

116
ಮೈಮರೆತ ಮೂಲಕ ವಿಷಯವಿಷವನ್ನು ಅಮೃತವೆಂದು ಭಾವಿಸುವರು. ಅಳಿವ ಸಿರಿಯನ್ನು ಸ್ಥಿತ ಎಂದು ಬಗೆವರು. ಕಾಯವೇ ತಾವು, ಕಾಯಸುಖವನ್ನು ಪಡೆಯುವದೇ ತಮ್ಮ ಪರಮ ಗುರಿಯೆಂಬ ಭಾವನೆಯಿಂದ ಅವರು ಸಂಸಾರಸುಖವನ್ನು ಗಳಿಸಲು ಸಾರಿ, ಅದರ ಸೆಳವಿನಲ್ಲಿ ಸಿಲುಕಿ ಬಳಲುತ್ತಿರುವರು. ಮರುವಿನ ಮೂಲಕ ಅವರಿಗೆ ಅದರ ಅರಿವು, ಪರಿವೆ ಇರುವುದಿಲ್ಲ. ಆದರೆ ಅವರ ಈ ಮರುಳುತನವನ್ನು ಕಂಡು ಅರಿತ ಶರಣರು, ಮಹಾತ್ಮರು, ಮರಗುವರು... ಅವರನ್ನು ಎಚ್ಚರಿಸಲೆತ್ನಿಸುವರು. ಅವರಿಗೆ ನಿಜವಾದ ಆನಂದದ ದಾರಿಯನ್ನು ಕಾಣಿಸುವರು. ತಮ್ಮ ಬಾಳಿನ ಹಾಗೂ ಬೋಧೆಯ ಬೆಳಕನ್ನು ನೀಡಿ, ಶರಣರು ಅವರನ್ನು ಆ ದಾರಿಯಿಂದ ಕರೆದೊಯ್ಯುವರು. ಅವರಿಗೆ ತಾವು ಕಂಡ ದಿವ್ಯಾನಂದದ ಸವಿಯನ್ನು ಉಣಿಸುವರು.
ಬಸವಣ್ಣನವರು ಅದನ್ನೇ ಮಾಡಿದರು. ಮೊದಲು ಅವರು ಸಂಸಾರದ ಸಿರಿಯು ಸ್ಥಿರವಲ್ಲ ಅದನ್ನು ನೆಮ್ಮಿ ಕೆಡಬೇಡಿರಯ್ಯಾ! ನಿಮಗೆ ಕೇಡಿಲ್ಲದ ಶಾಶ್ವತಜೀವನವು ಬೇಕಾಗಿದ್ದರೆ ಸಂಗನನ್ನು ಭಜಿಸಿರಿ, ಎಂದು ಜನರಿಗೆ ಸಾರಿ ಹೇಳಿದರು :
ಎಲೆ ಎಲೆ ಮಾನವಾ ಅಳಿಯಾಸೆ ಬೇಡವೋ !
ಕಾಳಬೆಳದಿಂಗಳು ಸಿರಿ ಸ್ಥಿರವಲ್ಲ !
ಕೇಡಿಲ್ಲದ ಪದವಿ, ಕೂಡಲಸಂಗಮದೇವನ ಮರೆಯದೆ ಪೂಜಿಸೋ.
ಸಂಸಾರವೆಂಬುದೊಂದು ಗಾಳಿಯ ಸೊಡರು,
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ !
ಇದ ನೆಚ್ಚಿ ಕೆಡಬೇಡ - ಸಿರಿಯೆಂಬುದ
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.
ಸಂಸಾರವು ಅಸ್ಥಿರವಿರುವಂತೆ, ನಮ್ಮ ದೇಹವು ಕೂಡ ಅಸ್ಥಿರವಿರುವದು. ಅದು ಎಂದು ಅಳದೀತೆಂಬುದನ್ನು ಹೇಳಲು ಬರುವದಿಲ್ಲ. ಆದರೂ ಜನರು ಅದನ್ನು ಬಗೆಬಗೆಯ ಸಾಧನಗಳಿಂದ ಅಳಿಯದಂತೆ ಮಾಡಲು