ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
117

ಹೆಣಗುವರು. ಈ ನಿಮ್ಮ ಯತ್ನವು ವ್ಯರ್ಥವಯ್ಯಾ. ಆದುದರಿಂದ ದೇಹದ ಈ ಹೊಲಸು ಜನನ ಮರಣದ ಚಕ್ರದಿಂದ ನೀವು ಪಾರಾಗಬೇಕಾದರೆ ಸಂಗನನ್ನು ಭಜಿಸಿರಯ್ಯಾ, ಎಂಬುದು ಬಸವಣ್ಣನವರ ಹೇಳಿಕೆ.

ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ !
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕುವೋ ಕಾಯವ ನಿಶ್ಚಯಿಸದೆ !
ಉತ್ಪತ್ತಿ ಶುಕ್ಲ ಶೋಣಿತದಿಂದಾದ ಲಜ್ಜೆ ಸಾಲದೇ ?
ಮತ್ತೆ ದುರಂತಂಗಳ ಹೊರುವ ಹೆಗ್ಗತನವೇಕಯ್ಯಾ ?
ಮೃತ್ಯುವಿನ ಬಾಯಿಗೆ ತುತ್ತಾಗಲೇಕೆ ?
ಒತ್ತೊತ್ತೆಯ ಜನನವ ಗೆಲವೊಡೆ ಕರ್ತನ ಪೂಜಿಸು
ನಮ್ಮ ಕೂಡಲಸಂಗಮದೇವನ.

ಇನ್ನು ವಿಷಯಸುಖದ ನೈಜಸ್ವರೂಪವನ್ನು ಅವರು ಹೇಗೆ ಬಣ್ಣಿಸಿರುವರು ನೋಡಿ :

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು;
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆಯ ಹೋಯಿತ್ತಲ್ಲದೆ,
ಅದಂದೇ ಹುಟ್ಟಿತ್ತು. ಅದಂದೇ ಹೊಂದಿತ್ತು.
ಕೊಂಡವರುಳಿದರೆ ಕೂಡಲಸಂಗಮದೇವಾ?
ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆ ಮಾಡುವಂತೆ,
ಸೂಲವನೇರುವ ಕಳ್ಳನು ಹಾಲುತುಪ್ಪವ ಕುಡಿದು
ಮೇಲೇಸು ಕಾಲ ಬದುಕುವನೋ ?
ಕೆಡುವೊಡಲ ನಚ್ಚಿ ಕಡುಹುಸಿಯನೆ ಹಸಿದು, ಒಡಲ ಹೊರೆವರ
ಕೂಡಲಸಂಗಮದೇವನವರನ್ನೆಲ್ಲ ಕಾಣಿರಣ್ಣಾ !