ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
143

ಹಿರಿಮೆಯನ್ನು ಕಾಣಿಸುವ ಹಿರಿದಾದ ಕುರುಹು, ಅವರ ಮಹಿಮೆಯನ್ನು ಮಹಿಯಲ್ಲಿ ಮೆರೆಯಿಸುವ ಭವ್ಯವಾದ, ದಿವ್ಯವಾದ ಬಾವುಟ !

ಶ್ರೀ ಬಸವಣ್ಣನವರು ನಮಗೆ ಅದಾವ ಸಂದೇಶವನ್ನು ಸಲ್ಲಿಸಿರುವರು? ಅವರ ಸಂದೇಶದಲ್ಲಯ ಸನಾತನ ಅಂಶಗಳಾವವು? “ಅರಿತರೆ ಶರಣ, ಮರೆತರೆ ಮಾನವ ಎಂಬುದು ಅವರ ಸಂದೇಶದಲ್ಲಿ ಮೊದಲನೆಯ ಸನಾತನ ಅಂಶ. ಅರಿವು ಅಂದರೆ ಜ್ಞಾನ, ಮರವು ಅಂದರೆ ಅಜ್ಞಾನ, ಶರಣನು ಏನನ್ನು ಅರಿತಿರುವ ? ಮಾನವನು ಏನನ್ನು ಮರೆತಿರುವ ? ಶರಣನು ತನ್ನನ್ನು ಅರಿತಿರುವ ತನ್ನ ನಿಜಸ್ವರೂಪವನ್ನು ಅರಿತಿರುವ. ತನ್ನ ಆತ್ಮನನ್ನು ಅರಿತಿರುವ. ಮಾನವನು ಅದನ್ನೆಯ ಮರೆತಿರುವ. ಅವನಿಗೆ ತಾನಾರು ? ತನ್ನ ನಿಜರೂಪ ಎಂತಹದು ? ಎಂಬುದರ ಅರಿವು ಇರುವುದಿಲ್ಲ. ಅವನು ತನ್ನ ದೇಹವೇ ತಾನೆಂದು ಬಗೆದಿರುವ. ಅದರ ಆರೈಕೆಯಲ್ಲಿಯೇ ತನ್ನ ಕಾಲವನ್ನು ಕಳೆಯುತ್ತಿರುವ ತನ್ನಲ್ಲಿರುವ ಆತ್ಮನ ಅರಿವೇ ಆತನಿಗಿರುವದಿಲ್ಲ. ಆದುದರಿಂದ ಈ ಮರೆವನ್ನು ತೊರೆದು, ತನ್ನ ತಾನರಿತು, ಅವನು ಶರಣಾಗಬೇಕೆಂದು ಬಸವಣ್ಣನವರು ಬೋಧಿಸಿದರು.
ಈ ಬಗೆಯ 'ಆತ್ಮನ ಜ್ಞಾನ'ವು 'ಅರಿವಿ'ನ ತಿರುಳು. ಆದರೆ “ಆತ್ಮಜ್ಞಾನ' ಇಲ್ಲವೇ 'ತನ್ನ ತಾನರಿ!' ಎಂಬ ಅರ್ಥಪೂರ್ಣವಾದ ಸೂತ್ರ ಮತ್ತೂ ಕೆಲ ಮಾತುಗಳನ್ನು ಒಳಗೊಂಡಿರುವದು. ತನ್ನ ತಾನರಿಯುವದೆಂದರೆ, ತನ್ನ ದೇಹ, ಮನ, ಬುದ್ದಿ ಆತ್ಮ ಇವೆಲ್ಲವುಗಳನ್ನು ಅರಿವುದು. ಇವುಗಳ ಸ್ವರೂಪವೇನು? ಇವುಗಳ ಪರಸ್ಪರ ಸಂಬಂಧವೇನು? ಇವುಗಳಲ್ಲಿಯ ನಿತ್ಯವಾವುದು? ಅನಿತ್ಯವಾವುದು? ತನ್ನ ಶಾಶ್ವತವಾದ ನಿಜರೂಪವಾವುದು? ಎಂಬುದನ್ನು ಅರಿಯುವುದು. ಇದು ಬೌದ್ಧಿಕ ವಿಚಾರ, ಬೌದ್ಧಿಕ ಜ್ಞಾನ. ಇದು ದರ್ಶನಕ್ಕೆ ಸಂಬಂಧಿ ಸಿದುದು. ಇದಕ್ಕೆ ವಿವೇಕಜಾಗೃತಿಯು ಬೇಕು. ದೇಹೇಂದ್ರಿಯಗಳು ಅನಿತ್ಯ, ಅಸಾರ ; ಆತ್ಮನು- ಪರಮಾತ್ಮನು ನಿತ್ಯನು, ಸಾರಭೂತನು. ಆದುದರಿಂದ ಮಾನವನು ಅಸಾರವನ್ನು ತೊರೆದು ಸಾರವನ್ನು